ವಿಭಿನ್ನ ಉಪವಾಸದ ಹೆಸರುಗಳ ಪಟ್ಟಿ ಅರ್ಥದೊಂದಿಗೆ | List of Different Fast (Upavasa) Names with Meaning in Kannada

ನಮಸ್ತೆ ನನ್ನ ಆತ್ಮೀಯ ಸ್ನೇಹಿತರೇ, ನೀವು ಇಂದು ಹೇಗಿದ್ದೀರಿ? #BhagavanBhakthi ವೆಬ್‌ಸೈಟ್ / ಬ್ಲಾಗ್‌ಗೆ ಸುಸ್ವಾಗತ.

ಭಗವಂತ ಶ್ರೀ ವಿಷ್ಣು, ಕೃಷ್ಣ, ರಾಮ, ಹರಿ, ನಾರಾಯಣ, ತ್ರಿವಿಕ್ರಮ, ನಾರಸಿಂಹನ, ದೇವಿ ಲಕ್ಷ್ಮಿ, ರುಕ್ಮಿಣಿ, ಸೀತಾ, ಧಾರಿಣಿ, ಮಾಧವಿ ಮತ್ತು ಶ್ರೀ ತುಳಸಿ ದೇವಿಯ ಆಶೀರ್ವಾದವು ನಿಮ್ಮ ಮತ್ತು ನಿಮ್ಮ ಕುಟುಂಬದೊಂದಿಗೆ ಸದಾ ಇರಲಿ!

ಈ ವೆಬ್‌ಸೈಟ್ / ಬ್ಲಾಗ್‌ನಲ್ಲಿ, ನೀವು ಯಾವಾಗಲೂ #ಹಿಂದೂಧರ್ಮ #ಸಂಸ್ಕೃತ ಭಾಷೆಯ ಬಗ್ಗೆ ಕಲಿಯುತ್ತೀರಿ.

#ಹಿಂದೂಧರ್ಮ #ಸಂಸ್ಕೃತ ಭಾಷೆಯ ಕುರಿತು ವೀಡಿಯೊಗಳನ್ನು ವೀಕ್ಷಿಸಲು ನನ್ನ YouTube ಚಾನೆಲ್ #BhagavanBhakthi ಗೆ ಉಚಿತ ಚಂದಾದಾರರಾಗಿ.

ವಿಭಿನ್ನ ಉಪವಾಸದ ಹೆಸರುಗಳ ಪಟ್ಟಿ ಅರ್ಥದೊಂದಿಗೆ | List of Different Fast (Upavasa) Names with Meaning in Kannada” ಬಗ್ಗೆ ತಿಳಿದುಕೊಳ್ಳುವ ಮೊದಲು, ನಾವು ಕೆಲ ಮೂಲಭೂತ ಮಾಹಿತಿಯನ್ನು ತಿಳಿದುಕೊಳ್ಳೋಣ.

ಉಪವಾಸ ವ್ರತದ ದಿನದ ಕಾರ್ಯಗಳು (ಶ್ರವಣ ಏಕಾದಶಿ ಹೊರತುಪಡಿಸಿ ಬೇರೆಯ ಉಪವಾಸ ದಿನಗಳಂದು) –

ಉಪವಾಸ ಮಾಡುವವರು, ನಿಷೇಧಿತ ವಿಷಯಗಳಿಂದ ದೂರವಿರಬೇಕು ಮತ್ತು ಯಾವಾಗಲೂ ಭಗವಂತ ಶ್ರೀ ವಿಷ್ಣುವಿನ ಬಗ್ಗೆ ಯೋಚಿಸಬೇಕು ಮತ್ತು ಭಗವಂತ ಶ್ರೀ ವಿಷ್ಣುವನ್ನು ಸದಾ ಸಂತೋಷಪಡಿಸುವಂತಹ ಕೆಲಸಗಳನ್ನು ಮಾತ್ರ ಮಾಡಬೇಕು.

ಉಪವಾಸ ದಿನದಂದು ಯಾವುದೇ ಭೋಗ (ಐಷಾರಾಮಿ, ಕಾಮ ಇತ್ಯಾದಿ) ಕೆಲಸಗಳನ್ನು ಮಾಡಲೇಬಾರದು.

ಸನಾತನ ಧರ್ಮದ ಗ್ರಂಥಗಳನ್ನು ಓದುವುದು (ವಿಶೇಷವಾಗಿ ಭಗವಂತ ಶ್ರೀ ವಿಷ್ಣುವಿಗೆ ಸಂಬಂಧಿಸಿದಂತೆ), ಶ್ರೀ ಹರಿಯ ಕಾಲಕ್ಷೇಪಗಳನ್ನು ಆಲಿಸುವುದು, ಭಗವಂತ ಶ್ರೀ ವಿಷ್ಣುವಿಗೆ ಸಂಬಂಧಿಸಿದ ಕೆಲಸಗಳನ್ನು ಮಾತ್ರ ಮಾಡಬೇಕು.

ಈ ಮೂರು ದಿನಗಳಂದು (ದಶಮಿ, ಏಕಾದಶಿ ಮತ್ತು ದ್ವಾದಶಿ) ಉಪವಾಸ ಮಾಡುವವರು ತಿನ್ನುವುದು, ದೇಹದ ಯಾವುದೇ ಭಾಗಕ್ಕೆ ಎಣ್ಣೆ ಹಚ್ಚುವುದು, ಹಗಲಿನ ವೇಳೆಯಲ್ಲಿ ಮಲಗುವುದು, ಸಾಕಷ್ಟು ನೀರು ಕುಡಿಯುವುದು ಇತ್ಯಾದಿಗಳನ್ನು ಮಾಡಲೇಬಾರದು.

ಸರ್ವೋಚ್ಛ ದಿನವಾದ ಏಕಾದಶಿಯಂದು, ಉಪವಾಸ ಮಾಡುವವರು ತೀರ್ಥವನ್ನು ಹೆಚ್ಚು ಬಾರಿ ತೆಗೆದುಕೊಳ್ಳಬಾರದು (ನೆನಪಿಡಿ ತೀರ್ಥವನ್ನು ಒಮ್ಮೆ ಮಾತ್ರ ತೆಗೆದುಕೊಳ್ಳಬಹುದು ಮತ್ತು ಅದು ತುಂಬಾ ಸೀಮಿತವಾಗಿರಬೇಕು),

ಹಿಂಸೆ, ದ್ವೇಷ, ಅಸತ್ಯ ಮಾತನಾಡುವುದು, ತಾಂಬುಲಾ (ಎಲೆ-ಅಡಿಕೆಗಳು) ತಿನ್ನುವುದು, ಹಗಲಿನ ಸಮಯದಲ್ಲಿ ಮಲಗುವುದು, ಸಂಭೋಗ ಮಾಡುವುದು, ಜೂಜು ಆಡುವುದು ಇತ್ಯಾದಿಗಳನೆಲ್ಲಾ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಏಕಾದಶಿ ದಿನದಂದು (12 ಬಾರಿ) ಬಾಯಿ ಮುಕ್ಕಳಿಸುವುದು ಮಾಡಿದರೆ, ಅದನ್ನು ಏಕಾದಶಿ ದಿನದಂದು ಹಲ್ಲುಜ್ಜುವುದು ಎಂದು ಪರಿಗಣಿಸಲಾಗುತ್ತದೆ –

ಮೂರು ದಿನಗಳಲ್ಲಿ (ದಶಮಿ, ಏಕಾದಶಿ ಮತ್ತು ದ್ವಾದಶಿ ದಿನಗಳು) ಉಪವಾಸ ಮಾಡುವವರು ಆಹಾರವನ್ನು ಹೆಚ್ಚು ತಿನ್ನಲೇಬಾರದು – ಅಂದರೆ,

ದಶಮಿ ದಿನದಂದು ಉಪವಾಸ ಮಾಡುವವರು ರಾತ್ರಿ ಹೊತ್ತು ಆಹಾರ ತೆಗೆದುಕೊಳ್ಳುವಂತಿಲ್ಲ (ರಾತ್ರಿ ಫಲಾಹಾರ ತೆಗೆದುಕೊಳ್ಳಬಹುದು), ಏಕಾದಶಿ ದಿನದಂದು ಸಂಪೂರ್ಣ ಉಪವಾಸ ಮತ್ತು ದ್ವಾದಶಿ ದಿನದಂದು ಸಿಮಿತವಾಗಿ ಮಾತ್ರ ಆಹಾರವನ್ನು ತೆಗೆದುಕೊಳ್ಳಬೇಕು.

ಏಕಾದಶಿ ದಿನದಂದು ಯಾರಾದರೂ ಮೃತರಾದರೆ, ಆ ವ್ಯಕ್ತಿಯ ಶ್ರಾದ್ಧಾವನ್ನು ದ್ವಾದಶಿ ದಿನದಂದು ಮಾಡಬೇಕು (ದಯವಿಟ್ಟು ಇನ್ನಷ್ಟು ತಿಳಿದುಕೊಳ್ಳಲು ಸರಿಯಾದ ವೈಷ್ಣವ ಬ್ರಾಹ್ಮಣರನ್ನು ಸಂಪರ್ಕಿಸಿ).

ದ್ವಾದಶಿ ದಿನದಂದು, ಕೆಲವು ಅನಿರೀಕ್ಷಿತ ಕಾರಣಗಳಿಂದ ಉಪವಾಸ ಮಾಡುವವರು ಪಾರಣೆ ಮಾಡಲು ಸಾಧ್ಯವಾಗದಿದ್ದರೆ, ಆ ವ್ಯಕ್ತಿಯು ವ್ರತವನ್ನು ಸಂಪೂರ್ಣಗೊಳಿಸಲು ಸ್ವಲ್ಪ ನೀರನ್ನು ಕುಡಿಯಬಹುದು.

(ಅಂಬಾರಿಷಾ ಮಹಾರಾಜರ ಕಥೆಯನ್ನು ನೆನಪಿಡಿ – ದುರ್ವಾಸ ಮುನಿಯವರು, ಅಂಬರಿಷಾ ಮಹಾರಾಜರನ್ನು ಅನಿರೀಕ್ಷಿತವಾಗಿ ಭೇಟಿಯಾಗಲು ಬಂದಾಗ, ಆ ಸಮಯದಲ್ಲಿ ಅಂಬಾರಿಷಾ ಮಹಾರಾಜರು ವ್ರತವನ್ನು ಸಂಪೂರ್ಣಗೊಳಿಸಲು ಸ್ವಲ್ಪ ನೀರನ್ನು ಸೇವಿಸುತ್ತಾರೆ.)

ವಿಭಿನ್ನ ಉಪವಾಸದ ಹೆಸರುಗಳ ಪಟ್ಟಿ ಅರ್ಥದೊಂದಿಗೆ ಕೆಳಗೆ ನೀಡಲಾಗಿದೆ:

1. ಏಕಭುಕ್ತ : ಇಲ್ಲಿ ಏಕ ಎಂದರೆ ಒಂದು, ಭುಕ್ತ ಎಂದರೆ ಬಿಡುವುದು – ಇದರರ್ಥ ಒಂದು ಸಮಯದ ಆಹಾರವನ್ನು ಬಿಡುವುದು.

2. ದ್ರವಾಹಾರ : ಇಲ್ಲಿ ದ್ರವ ಎಂದರೆ ದ್ರವಪದಾರ್ಥ ಮತ್ತು ಆಹಾರ ಎಂದರೆ ತಿನ್ನುವ ಆಹಾರ – ಇದರರ್ಥ ದ್ರವ ಆಹಾರವನ್ನು ಮಾತ್ರ ಸೇವಿಸುವುದು.

3. ಫಲಾಹಾರ : ಇಲ್ಲಿ ಫಲ ಎಂದರೆ ಹಣ್ಣುಗಳು ಮತ್ತು ಆಹಾರ ಎಂದರೆ ತಿನ್ನುವ ಆಹಾರ – ಇದರರ್ಥ ಹಣ್ಣುಗಳನ್ನು ಮಾತ್ರ ತಿನ್ನುವುದು.

4. ವಿಹಿತಾಹಾರ : ಇಲ್ಲಿ ವಿಹಿತ ಎಂದರೆ ಅನುಮತಿಸಲಾದ ಮತ್ತು ಅಹಾರ ಎಂದರೆ ತಿನ್ನುವ ಆಹಾರ – ಇದರರ್ಥ ಅನುಮತಿಸಲಾದ ಆಹಾರವನ್ನು ಮಾತ್ರ ಸೇವಿಸಬವುದು.

5. ಮಿತಾಹಾರ : ಇಲ್ಲಿ ಮಿತ ಎಂದರೆ ಸೀಮಿತ ಮತ್ತು ಅಹಾರ ಎಂದರೆ ತಿನ್ನುವ ಆಹಾರ – ಇದರರ್ಥ ಸೀಮಿತ ಆಹಾರವನ್ನು ಮಾತ್ರ ಸೇವಿಸುವುದು.

6. ನಿರಾಹಾರ : ಇಲ್ಲಿ ನೀರ ಎಂದರೆ ಏನನ್ನೂ ಸೇವಿಸಬಾರದು ಮತ್ತು ಆಹರಾ ಎಂದರೆ ತಿನ್ನುವ ಆಹಾರ – ಇದರರ್ಥ ಏನನ್ನೂ ಕೂಡ ತಿನ್ನುವಂತಿಲ್ಲ – ನೀರೂ ಸಹಾ ಸೇವಿಸುವಂತಿಲ್ಲ. ‘ನಿರಾಹಾರ’ ಎನ್ನುವುದಕ್ಕೆ ಇನ್ನೊಂದು ಹೆಸರು ‘ನಿರ್ಜಲ’ ಎಂದರ್ಥ, ಎಂದರೆ ಒಂದು ಹನಿ ನೀರನ್ನೂ ಸಹಾ ಸೇವಿಸದೆ ಉಪವಾಸವನ್ನು ಮಾಡುವುದು.

ಮೇಲೆ ಹೇಳಿದ ಉಪವಾಸಗಳಲ್ಲಿ, ‘ನಿರಾಹಾರ ಅಥವಾ ನಿರ್ಜಲ’ ಉಪವಾಸವನ್ನು ಮಾಡುವುದು ಅತ್ಯುತ್ತಮ ಮತ್ತು ಇದು ಅಂತಿಮವಾಗಿ ನಮಗೆ ಉತ್ಕೃಷ್ಟ ಫಲವನ್ನು ನೀಡುತ್ತದೆ.

(ಉದಾಹರಣೆಗೆ – ಒಬ್ಬ ವಿದ್ಯಾರ್ಥಿ ವರ್ಷವಿಡೀ ಸರಿಯಾದ ರೀತಿಯಲ್ಲಿ ಅಧ್ಯಯನ ಮಾಡಿದರೆ, ನಂತರ ಆ ವಿದ್ಯಾರ್ಥಿಯು ಅತ್ಯುತ್ತಮ ಅಂಕಗಳನ್ನು ಪಡೆಯುತ್ತಾನೆ(ಳೆ) ಅಥವಾ 100 ಕ್ಕೆ 100 ಅಂಕಗಳನ್ನು ಪಡೆಯುತ್ತಾನೆ(ಳೆ).)

(ಅದೇ ರೀತಿ ಯಾರಾದರೂ ಅರ್ಧದಷ್ಟು ಮಾತ್ರ ಅಧ್ಯಯನ ಮಾಡಿದರೆ, ಆ ವಿದ್ಯಾರ್ಥಿಗೆ ಸುಮಾರಾಗಿ ಮಾತ್ರ ಅಂಕಗಳು ಸಿಗುತ್ತವೆ. ಹಾಗೆಯೇ, ಏನೂ ಅಧ್ಯಯನ ಮಾಡದಯೇ ಅಥವಾ ಕಡಿಮೆ ಅಧ್ಯಯನ ಮಾಡುವ ವಿದ್ಯಾರ್ಥಿಯು, ಕೇವಲ ಪಾಸ್ ಅಂಕಗಳನ್ನು ಪಡೆಯುತ್ತಾನೆ(ಳೆ) ಅಥವಾ ಅವನು / ಅವಳು ಪರೀಕ್ಷೆಯಲ್ಲಿ ವಿಫಲವಾಗಬಹುದು ಎಂದರ್ಥ.)

(ನಾವು ಭಗವಂತ ಶ್ರೀ ವಿಷ್ಣುವಿಗೆ ಹೆಚ್ಚು ಹತ್ತಿರವಾಗಬೇಕಾದರೆ ನೆನಪಿಡಿ – ನಾವು ನಮ್ಮ ಧರ್ಮದ ಕರ್ತವ್ಯಗಳನ್ನು ಸರಿಯಾಗಿ, ಸರಿಯಾದ ರೀತಿಯಲ್ಲಿ, ಸಂಪೂರ್ಣ ಭಕ್ತಿಯಿಂದ, ಪೂರ್ಣ ಗೌರವದಿಂದ ನಿರ್ವಹಿಸಬೇಕಾಗುತ್ತದೆ.)

(ಹೀಗೆ ಮಾಡಿದರೆ ಮಾತ್ರ ನಾವು ಹೆಚ್ಚು ಹೆಚ್ಚು ಅಂಕಗಳನ್ನು ಪಡೆಯುತ್ತೇವೆ ಇಲ್ಲದಿದ್ದರೆ ನಮ್ಮ ಅರ್ಹತೆ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಅಂಕಗಳನ್ನು ಪಡೆಯುತ್ತೇವೆ. ಎಲ್ಲವೂ ನಮಗೆ ಬಿಟ್ಟಿದೆ.)

ಈ ಪೋಸ್ಟ್‌ಗೆ ನಿಯಮಿತವಾಗಿ ಹೆಚ್ಚಿನ ಮಾಹಿತಿಯನ್ನು ಸೇರಿಸಲಾಗುತ್ತದೆ. ಸ್ವಲ್ಪ ಸಮಯದ ನಂತರ ದಯವಿಟ್ಟು ಈ ಪೋಸ್ಟ್‌ಗೆ ಪುನಃ ಭೇಟಿ ನೀಡಿ.

ಹಿಂದೂ (ಸನಾತನ) ಧರ್ಮ ಬಗ್ಗೆ ಮಾಹಿತಿ, ಸಂಗತಿಗಳು, ಹಿರಿಮೆ, ಮಹತ್ವ, ಪ್ರಾಮುಖ್ಯತೆ, ಇತ್ಯಾದಿ” ಕುರಿತು ಇನ್ನಷ್ಟು ತಿಳಿದುಕೊಳ್ಳಲು, ದಯವಿಟ್ಟು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ: ಹಿಂದೂ (ಸನಾತನ) ಧರ್ಮ ಬಗ್ಗೆ ಮಾಹಿತಿ, ಸಂಗತಿಗಳು, ಹಿರಿಮೆ, ಮಹತ್ವ, ಪ್ರಾಮುಖ್ಯತೆ, ಇತ್ಯಾದಿ

To watch videos on #Hinduism #Sanskrit language, SUBSCRIBE to my YouTube channel from this link: #BhagavanBhakthi YouTube channel

ಆತ್ಮೀಯ ಸ್ನೇಹಿತರೇ, ಈ ಪೋಸ್ಟ್ ಬಗ್ಗೆ ನಿಮಗೆ ಯಾವುದೇ ಸ್ಪಷ್ಟೀಕರಣಗಳು ಬೇಕಾದರೆ, ದಯವಿಟ್ಟು ನನಗೆ ತಿಳಿಸಿ, ನಾನು ಖಂಡಿತವಾಗಿಯೂ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸುತ್ತೇನೆ.

ನಿಮ್ಮ ಒಂದು ಲೈಕ್, ಒಂದು ಕಾಮೆಂಟ್, ಒಂದು ಶೇರ್‌, ಒಂದು ಸಬ್‌ಸ್ಕ್ರಿಪ್ಷನ್ ತುಂಬಾ ಹೆಚ್ಚು ಮುಖ್ಯವಾಗುತ್ತದೆ.

ಇದು ಈ ವಿಷಯದ ಗುಣಮಟ್ಟವನ್ನು ತಿಳಿಯಲು ಸಹಾಯ ಮಾಡುತ್ತದೆ ಮತ್ತು ವಿಷಯಕ್ಕೆ ಯಾವುದೇ ಸುಧಾರಣೆಗಳು ಅಗತ್ಯವಿದೆಯೇ ಎಂದು ತಿಳಿಯಲು ಸಹಕಾರಿಯಾಗುತ್ತದೆ.

ಈ ವಿಷಯವು ನಿಮಗೆ ಉಪಯುಕ್ತವಾಗಿದೆ ಮತ್ತು ನಿಮ್ಮ ಜ್ಞಾನವನ್ನು ಹೆಚ್ಚಿಸಲು ನಿಮಗೆ ಸಹಾಯ ಮಾಡಿದೆ ಎಂದು ನೀವು ಭಾವಿಸಿದರೆ, ಇದನ್ನು ನಿಮ್ಮ ಹಿತೈಷಿಗಳೊಂದಿಗೆ ದಯವಿಟ್ಟು ಶೇರ್‌ ಮಾಡಿಕೊಳ್ಳಿ.

ಏಕೆಂದರೆ “ಶೇರ್‌ ಮಾಡುವುದೆಂದರೆ ಕೇರ್‌ ಮಾಡುವುದು ಎಂದರ್ಥ”.

#BhagavanBhakthi ಯ ಬಗ್ಗೆ ಉಚಿತ ಇ-ಮೇಲ್ ಚಂದಾದಾರಿಕೆಯನ್ನು ಪಡೆಯಲು, ನಿಮ್ಮ ಇ-ಮೇಲ್ ID ಯಿಂದ [email protected] ಗೆ ಇ-ಮೇಲ್ ಕಳುಹಿಸಬಹುದು.

ವಂದನೆಗಳು!

ಶ್ರೀ ಗುರುಭ್ಯೋ ನಮಃ

ಶ‍್ರೀ ಕ‍ೃಷ್ಣಾಯ ನಮಃ

ಶ್ರೀ ಕೃಷ್ಣಾರ್ಪಣಮಸ್ತು

Share in Social Media

Leave a Reply

Your email address will not be published. Required fields are marked *