ದತ್ತಾತ್ರೇಯ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಸಂಗಮವೇ | ದತ್ತಾತ್ರೇಯನಿಗೆ 3 ಮುಖಗಳಿವೆಯೇ ಅಥವಾ 1 ಮುಖವಿದೆಯೇ | Is Dattatreya confluence of Brahma, Vishnu and Mahesh | Lord Dattatreya has 3 faces or 1 face in Kannada

ನಮಸ್ತೆ ನನ್ನ ಆತ್ಮೀಯ ಸ್ನೇಹಿತರೇ, ನೀವು ಇಂದು ಹೇಗಿದ್ದೀರಿ? #BhagavanBhakthi ವೆಬ್‌ಸೈಟ್ / ಬ್ಲಾಗ್‌ಗೆ ಸುಸ್ವಾಗತ. ಭಗವಂತ ಶ್ರೀ ವಿಷ್ಣುವಿನ ಆಶೀರ್ವಾದವು ನಿಮ್ಮ ಮತ್ತು ನಿಮ್ಮ ಕುಟುಂಬದೊಂದಿಗೆ ಸದಾ ಇರಲಿ!

ಈ ವೆಬ್‌ಸೈಟ್ / ಬ್ಲಾಗ್‌ನಲ್ಲಿ, ನೀವು ಯಾವಾಗಲೂ #ಹಿಂದೂಧರ್ಮ #ಸಂಸ್ಕೃತ ಭಾಷೆಯ ಬಗ್ಗೆ ಕಲಿಯುತ್ತೀರಿ. #ಹಿಂದೂಧರ್ಮ #ಸಂಸ್ಕೃತ ಭಾಷೆಯ ಕುರಿತು ವೀಡಿಯೊಗಳನ್ನು ವೀಕ್ಷಿಸಲು ನನ್ನ YouTube ಚಾನಲ್ #BhagavanBhakthi ಗೆ ಚಂದಾದಾರರಾಗಿ.

ದತ್ತಾತ್ರೇಯ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಸಂಗಮವೇ | ದತ್ತಾತ್ರೇಯನಿಗೆ 3 ಮುಖಗಳಿವೆಯೇ ಅಥವಾ 1 ಮುಖವಿದೆಯೇ” ಎಂದು ತಿಳಿದುಕೊಳ್ಳುವ ಮೊದಲು, ದತ್ತಾತ್ರೇಯನ ಕೆಲ ಮೂಲಭೂತ ಅಂಶಗಳನ್ನು ನಾವು ತಿಳಿದುಕೊಳ್ಳೋಣ.

ದತ್ತಾತ್ರೇಯ ಭಗವಂತ ವಿಷ್ಣುವಿನ ಅವತಾರವಾಗಿದ್ದಾರೆ ಮತ್ತು ಭಗವಂತ ವಿಷ್ಣು ಮತ್ತು ದತ್ತಾತ್ರೇಯರ ನಡುವೆ ಯಾವುದೇ ವ್ಯತ್ಯಾಸವಿಲ್ಲ.

ದತ್ತಾತ್ರೇಯ ಪೋಷಕರ ಹೆಸರು ಮಹರ್ಷಿ ಅತ್ರಿ (ತಂದೆ) ಮತ್ತು ಅನಸೂಯಾ (ತಾಯಿ). ಅವರ ಇಬ್ಬರು ಸಹೋದರರು ಋಷಿ ದೂರ್ವಾಸ ಮತ್ತು ಚಂದ್ರ.

ಈಗ, ಕೆಳಗಿನ ವಿವರಣೆಯೊಂದಿಗೆ “ದತ್ತಾತ್ರೇಯನಿಗೆ 3 ಮುಖಗಳಿವೆಯೇ ಅಥವಾ 1 ಮುಖವಿದೆಯೇ” ಎಂದು ಅರ್ಥಮಾಡಿಕೊಳ್ಳೋಣ.

ನಮ್ಮ ಪುರಾಣಗಳ ಪ್ರಕಾರ, ಮೇಲೆ ಹೇಳಿದಂತೆ ಅತ್ರಿ ಮಹರ್ಷಿ ಮತ್ತು ಅನಸೂಯಾ ದೇವಿಯು ದತ್ತಾತ್ರೇಯನ ತಂದೆತಾಯಿಗಳು.

ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಅತ್ರಿ ಮಹರ್ಷಿ ಮತ್ತು ಅನಸೂಯಾದೇವಿ ದಂಪತಿಗಳಿಗೆ ಮೂರು ಮಕ್ಕಳಿದ್ದರು:

ದತ್ತಾತ್ರೇಯ (ವಿಷ್ಣುವಿನ ಅವತಾರ), ದೂರ್ವಾಸ ಮುನಿ (ಶಿವನ ಅವತಾರ) ಮತ್ತು ಚಂದ್ರ.

(ಬ್ರಹ್ಮದೇವರು ಈ ಭೂಮಿಯ ಮೇಲೆ ಅವತಾರವನ್ನು ತೆಗೆದುಕೊಳ್ಳುವುದಿಲ್ಲವಾದ್ದರಿಂದ, ಅವರು ಚಂದ್ರದೇವರ ಭಾಗವಾಗುತ್ತಾರೆ ಮತ್ತು ಹೀಗಾಗಿ ಚಂದ್ರ ಎಂದು ಹೆಸರು).

ದತ್ತಾತ್ರೇಯ ಹೆಸರಿನ ಅರ್ಥ:

ದತ್ತಾತ್ರೇಯ ಎಂಬ ಹೆಸರಿನ ಅರ್ಥವೇನೆಂದರೆ, ಭಗವಂತ ವಿಷ್ಣುವು ಅತ್ರಿ ಮಹರ್ಷಿಗಳಿಗೆ ದತ್ತನಾಗಿ (ತನ್ನನ್ನು ತಾನೇ ದಾನ ಮಾಡಿಕೊಳ್ಳುತ್ತಾನೆ) ಮತ್ತು ಭಗವಂತ ವಿಷ್ಣುವು (ದತ್ತಾತ್ರೇಯ) ಅತ್ರಿ ಮಹರ್ಷಿಯ ಮಗನಾಗಿರುವುದರಿಂದ, ಅವರು ‘ಆತ್ರೇಯ’ ರಾಗುತ್ತಾರೆ, ಅಂದರೆ ಅತ್ರಿ ಮಹರ್ಷಿಯ ಮಗರಾಗುತ್ತಾರೆ.

ಇಲ್ಲಿ ದತ್ತಾತ್ರೇಯ = ದತ್ತ + ಅತ್ರೇಯ = ತನ್ನನ್ನು ತಾನೇ ದಾನ ಮಾಡಿಕೊಳ್ಳುವುದು + ಅತ್ರಿಗೆ (ಅತ್ರಿಯ ಮಗ). ಇಲ್ಲಿ ಆತ್ರೇಯ ಎಂದರೆ ಅತ್ರಿಯ ಮಗ ಮತ್ತು ಮೂವರಲ್ಲ (ತ್ರಿ) – ಮೂರುಮುಖವಲ್ಲ.

ಆಂಜನೇಯ, ತಾಯಿ ಅಂಜನ ಅವರ ಮಗ ಇದ್ದಂತೆ. ಹಾಗೆಯೇ ದತ್ತಾತ್ರೇಯ ಅತ್ರಿಯ ಮಗ.

ಇಲ್ಲಿ ಆಂಜನೇಯ = ಅಂಜನ + ನೇಯ = ಅಂಜನ ದೇವಿಯ ಮಗ. ಹಾಗೆಯೇ ದತ್ತಾತ್ರೇಯನು ಅತ್ರಿ ಮಹರ್ಷಿಗಳ ಮಗ.

ದತ್ತಾತ್ರೇಯ ಕೇವಲ ಭಗವಂತ ವಿಷ್ಣುವಿನ ಅವತಾರ ಮತ್ತು ಅವರಿಗೆ 3 ಮುಖಗಳಿಲ್ಲ.

ವಾಸ್ತವವಾಗಿ, ಬೇರೆಯ ಇಬ್ಬರು, ಅಂದರೆ, ಶಿವ ಮತ್ತು ಬ್ರಹ್ಮ ದೇವರು (ಚಂದ್ರದೇವರ ಭಾಗವಾಗಿ) ಎರಡು ವಿಭಿನ್ನ ರೂಪಗಳನ್ನು, ಮುಖಗಳನ್ನು ಮತ್ತು ಅಂಗಗಳನ್ನು ಹೊಂದಿದ್ದಾರೆ.

ಅಂದರೆ, ಇನ್ನಿಬ್ಬರು ಶಿವ (ದೂರ್ವಾಸ ಋಷಿ) ಮತ್ತು ಬ್ರಹ್ಮ ದೇವರು (ಚಂದ್ರದೇವನ ಭಾಗವಾಗಿ).

ಮೇಲೆ ಹೇಳಿದಂತೆ, ಶಿವನು ದೂರ್ವಾಸ ಋಷಿಯ ಅವತಾರವನ್ನು ತೆಗೆದುಕೊಳ್ಳುತ್ತಾರೆ ಮತ್ತು ಅದೇ ರೀತಿ ಬ್ರಹ್ಮ ದೇವರು (ಚಂದ್ರದೇವನ ಭಾಗವಾಗಿ) ಚಂದ್ರನ ಅವತಾರವನ್ನು ತೆಗೆದುಕೊಳ್ಳುತ್ತಾರೆ.

ದತ್ತಾತ್ರೇಯರಿಗೆ 3 ಮುಖಗಳಿವೆ ಎಂಬುದು ಕೇವಲ ತಪ್ಪಾದ ಕಟ್ಟು ಕಥೆ ಮತ್ತು ತಪ್ಪು ವ್ಯಾಖ್ಯಾನವಾಗಿದೆ.

ನಮ್ಮ ಹಿಂದೂ ಪುರಾಣಗಳ ಪ್ರಕಾರ, ಇದು ಸಂಪೂರ್ಣವಾಗಿ ತಪ್ಪು. ದತ್ತಾತ್ರೇಯರಿಗೆ ಮೂರು ಮುಖಗಳಿವೆ ಎಂದು ನಮ್ಮ ಪುರಾಣಗಳಲ್ಲಿ ಎಲ್ಲಿಯೂ ಉಲ್ಲೇಖಿಸಲಾಗಿಲ್ಲ.

ಹೌದು, ದತ್ತಾತ್ರೇಯರಿಗೆ ಕೇವಲ 1 ಮುಖವಿದೆ ಮತ್ತು ಇನ್ನೆರಡು ಶಿವನನ್ನು ದೂರ್ವಾಸ ಋಷಿಯಾಗಿ ಮತ್ತು ಬ್ರಹ್ಮ ದೇವರನ್ನು (ಚಂದ್ರದೇವನ ಭಾಗವಾಗಿ) ಚಂದ್ರನಾಗಿ.

ಇಲ್ಲಿ ಎಲ್ಲಾ 3 ವಿಭಿನ್ನರಾಗಿದ್ದಾರೆ (ದತ್ತಾತ್ರೇಯ, ಶಿವ ಅನದ ಬ್ರಹ್ಮ ದೇವರು). ಅಂದರೆ ಭಗವಂತ ವಿಷ್ಣುವು ದತ್ತಾತ್ರೇಯ, ಬ್ರಹ್ಮ ದೇವರು ಚಂದ್ರ ಮತ್ತು ಶಿವನು ದೂರ್ವಾಸ ಮುನಿ.

ಮತ್ತು ಈ ಮೂವರೂ ತಮ್ಮದೇ ಆದ ವಿಭಿನ್ನ ಮತ್ತು ವಿಶಿಷ್ಟ ದೇಹಗಳನ್ನು ಮತ್ತು ಮುಖಗಳನ್ನು ಹೊಂದಿದ್ದಾರೆ.

ಪ್ರತಿಯೊಬ್ಬರೂ ತಮ್ಮದೇ ಆದ ಮತ್ತು ವಿಶಿಷ್ಟವಾದ ಮುಖಗಳನ್ನು ಹೊಂದಿದ್ದಾರೆ ಮತ್ತು ಎಲ್ಲರೂ ವಿಭಿನ್ನರಾಗಿದ್ಧಾರೆ. ಅಂದರೆ ದತ್ತಾತ್ರೇಯ ಬೇರೆ, ಚಂದ್ರ ಬೇರೆ, ದೂರ್ವಾಸ ಮುನಿ ಬೇರೆಯವರು.

ದೂರ್ವಾಸ ಮುನಿಯ ಬಗ್ಗೆ ಸಾಮಾನ್ಯವಾಗಿ ಅಂಬರೀಷ ಮಹಾರಾಜರ ಕಥೆಯಂತೆ ಬೇರೆ ಬೇರೆ ಸಂದರ್ಭಗಳಲ್ಲಿ ಕೇಳುತ್ತಿರುತ್ತೇವೆ.

ಹಾಗೆಯೇ ಪಂಚ ಪಾಂಡವರ ವನವಾಸ ಕಾಲದಲ್ಲಿ. ಇಲ್ಲಿ, ಕಾಡಿನಲ್ಲಿ ಪಂಚ ಪಾಂಡವರನ್ನು ಭೇಟಿಯಾಗಲು ದುರ್ಯೋಧನ ದೂರ್ವಾಸ ಮುನಿಯನ್ನು ಕಳುಹಿಸುತ್ತಾನೆ.

ಅಂತಿಮ ವಿವರಣೆ : ದತ್ತಾತ್ರೇಯರಿಗೆ ಕೇವಲ 1 ಮುಖವಿದೆ ಮತ್ತು ಬೇರೆಯ ಇಬ್ಬರು ಅವರ ಸಹೋದರರು, ಅಂದರೆ ಒಬ್ಬರು ದುರ್ವಾಸ ಋಷಿ (ಶಿವನ ಅವತಾರ) ಮತ್ತು ಇನ್ನೊಬ್ಬರು ಚಂದ್ರ (ಬ್ರಹ್ಮ ದೇವರು – ಚಂದ್ರದೇವನ ಭಾಗವಾಗಿ).

ಇದಕ್ಕೆ ನಿಯಮಿತವಾಗಿ ಹೆಚ್ಚಿನ ಮಾಹಿತಿಯನ್ನು ಸೇರಿಸಲಾಗುತ್ತದೆ. ದಯವಿಟ್ಟು ಸ್ವಲ್ಪ ಸಮಯದ ನಂತರ ಪುನಃ ಭೇಟಿ ನೀಡಿ.

To watch “Is Dattatreya confluence of Brahma, Vishnu and Mahesh | Lord Dattatreya has 3 faces or 1 face in English“, click the below YouTube video link:

ಹಿಂದೂ ಧರ್ಮದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಿ:

ಹಿಂದೂ ಧರ್ಮದ ಬಗ್ಗೆ ಹೆಚ್ಚಿನ ಮಾಹಿತಿ

ಆತ್ಮೀಯ ಸ್ನೇಹಿತರೇ, ಈ ಪೋಸ್ಟ್ ಬಗ್ಗೆ ನಿಮಗೆ ಯಾವುದೇ ಸ್ಪಷ್ಟೀಕರಣಗಳು ಬೇಕಾದರೆ, ದಯವಿಟ್ಟು ನನಗೆ ತಿಳಿಸಿ, ನಾನು ಖಂಡಿತವಾಗಿಯೂ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸುತ್ತೇನೆ.

ನಿಮ್ಮ ಒಂದು ಲೈಕ್, ಒಂದು ಕಾಮೆಂಟ್, ಒಂದು ಶೇರ್‌, ಒಂದು ಸಬ್‌ಸ್ಕ್ರಿಪ್ಷನ್ ತುಂಬಾ ಹೆಚ್ಚು ಮುಖ್ಯವಾಗುತ್ತದೆ.

ಇದು ಈ ವಿಷಯದ ಗುಣಮಟ್ಟವನ್ನು ತಿಳಿಯಲು ಸಹಾಯ ಮಾಡುತ್ತದೆ ಮತ್ತು ವಿಷಯಕ್ಕೆ ಯಾವುದೇ ಸುಧಾರಣೆಗಳು ಅಗತ್ಯವಿದೆಯೇ ಎಂದು ತಿಳಿಯಲು ಸಹಕಾರಿಯಾಗುತ್ತದೆ.

ಈ ವಿಷಯವು ನಿಮಗೆ ಉಪಯುಕ್ತವಾಗಿದೆ ಮತ್ತು ನಿಮ್ಮ ಜ್ಞಾನವನ್ನು ಹೆಚ್ಚಿಸಲು ನಿಮಗೆ ಸಹಾಯ ಮಾಡಿದೆ ಎಂದು ನೀವು ಭಾವಿಸಿದರೆ, ಇದನ್ನು ನಿಮ್ಮ ಹಿತೈಷಿಗಳೊಂದಿಗೆ ದಯವಿಟ್ಟು ಶೇರ್‌ ಮಾಡಿಕೊಳ್ಳಿ.

ಏಕೆಂದರೆ “ಶೇರ್‌ ಮಾಡುವುದೆಂದರೆ ಕೇರ್‌ ಮಾಡುವುದು ಎಂದರ್ಥ”.

#BhagavanBhakthi ಯ ಬಗ್ಗೆ ಉಚಿತ ಇ-ಮೇಲ್ ಚಂದಾದಾರಿಕೆಯನ್ನು ಪಡೆಯಲು, ನಿಮ್ಮ ಇ-ಮೇಲ್ ID ಯಿಂದ [email protected] ಗೆ ಇ-ಮೇಲ್ ಕಳುಹಿಸಬಹುದು.

ವಂದನೆಗಳು!

ಶ್ರೀ ಗುರುಭ್ಯೋ ನಮಃ

ಶ್ರೀ ರಾಘವೇಂದ್ರಾಯ ನಮಃ

ಶ್ರೀ ಕೃಷ್ಣಾರ್ಪನಮಸ್ತು

Subscribe / Follow us
Share in Social Media

Leave a Reply

Your email address will not be published. Required fields are marked *