ಸನಾತನ (ಹಿಂದೂ) ಧರ್ಮ (ಹಿಂದುತ್ವ) ಯಾವಾಗ ಪ್ರಾರಂಭವಾಗಿದ್ದು | When Hinduism (Sanatana Dharma) started in Kannada

ನಮಸ್ತೆ ನನ್ನ ಆತ್ಮೀಯ ಸ್ನೇಹಿತರೇ, ನೀವು ಇಂದು ಹೇಗಿದ್ದೀರಿ? #BhagavanBhakthi ವೆಬ್‌ಸೈಟ್ / ಬ್ಲಾಗ್‌ಗೆ ಸುಸ್ವಾಗತ.

ಭಗವಂತ ಶ್ರೀ ವಿಷ್ಣುವಿನ ಆಶೀರ್ವಾದವು ನಿಮ್ಮ ಮತ್ತು ನಿಮ್ಮ ಕುಟುಂಬದೊಂದಿಗೆ ಸದಾ ಇರಲಿ!

ಈ ವೆಬ್‌ಸೈಟ್ / ಬ್ಲಾಗ್‌ನಲ್ಲಿ, ನೀವು ಯಾವಾಗಲೂ #ಹಿಂದೂಧರ್ಮ #ಸಂಸ್ಕೃತ ಭಾಷೆಯ ಬಗ್ಗೆ ಕಲಿಯುತ್ತೀರಿ.

#ಹಿಂದೂಧರ್ಮ #ಸಂಸ್ಕೃತ ಭಾಷೆಯ ಕುರಿತು ವೀಡಿಯೊಗಳನ್ನು ವೀಕ್ಷಿಸಲು ನನ್ನ YouTube ಚಾನೆಲ್ #BhagavanBhakthi ಗೆ ಉಚಿತ ಚಂದಾದಾರರಾಗಿ.

ಸನಾತನ (ಹಿಂದೂ) ಧರ್ಮ (ಹಿಂದುತ್ವ) ಯಾವಾಗ ಪ್ರಾರಂಭವಾಗಿದ್ದು | When Hinduism (Sanatana Dharma) started in Kannada” ಬಗ್ಗೆ ತಿಳಿದುಕೊಳ್ಳುವ ಮೊದಲು, ನಾವು ಕೆಲ ಮೂಲಭೂತ ಮಾಹಿತಿಯನ್ನು ತಿಳಿದುಕೊಳ್ಳೋಣ.

ಶ್ರೀ ಹರಿಯ ಅನಂತಾನಂತ ಅವತಾರಗಳಲ್ಲಿ, ಶ್ರೀ ಬುದ್ಧನ ಅವತಾರವಾಗಿ 3,000 ವರ್ಷಗಳಾಗಿವೆ.

ಶ್ರೀ ಕೃಷ್ಣನ ಅವತಾರವಾಗಿ 5,000 ವರ್ಷಗಳಿಗಿಂತ ಹೆಚ್ಚು ಸಮಯವಾಗಿದೆ.

ಶ್ರೀ ರಾಮನ ಅವತಾರವಾಗಿ 8,69,000 ವರ್ಷಗಳಾಗಿವೆ.

ಅಂತೆಯೇ, ಶ್ರೀ ಹರಿಯ ಇತರೆ ಅವತಾರಗಳಾದ ಮತ್ಸ್ಯ, ಕುರ್ಮಾ, ವರಾಹ, ನರಸಿಂಹ ಇತ್ಯಾದಿಗಳು ಆಗಿ ಸುಮಾರು 38,93,000 ವರ್ಷಗಳಾಗಿವೆ. ಒಂದು ಕಲಿಯುಗದಲ್ಲಿ 4,32,000 ವರ್ಷಗಳಿರುತ್ತವೆ.

ಒಂದು ದ್ವಾಪರ ಯುಗದಲ್ಲಿ 4,32,000 * 2 = 8,64,000 ವರ್ಷಗಳಿರುತ್ತವೆ.

ಒಂದು ತ್ರೇತಾಯುಗದಲ್ಲಿ 4,32,000 * 3 = 12,96,000 ವರ್ಷಗಳಿರುತ್ತವೆ.

ಒಂದು ಸತ್ಯ / ಕೃತ ಯುಗದಲ್ಲಿ, 4,32,000 * 4 = 17,28,000 ವರ್ಷಗಳಿರುತ್ತವೆ.

ಈ ಎಲ್ಲಾ ಯುಗಗಳನ್ನು ಸೇರಿಸಿದರೆ ಒಂದು ಮಹಾಯುಗವಾಗುತ್ತದೆ, ಅಂದರೆ ಒಂದು ಮಹಾಯುಗದಲ್ಲಿ 43,20,000 ವರ್ಷಗಳಿರುತ್ತವೆ. 

ಒಂದು ಮನ್ವಂತರದಲ್ಲಿ ಎಪ್ಪತ್ತಕ್ಕಿಂತ ಸ್ವಲ್ಪ ಅಧಿಕ ಮಹಾಯುಗಗಳು ಇರುತ್ತವೆ.

ಇಂತಹ ಹದಿನಾಲ್ಕು ಮನ್ವಂತರಗಳು ಸೇರಿದರೆ ಒಂದು ಕಲ್ಪವಾಗುತ್ತದೆ.

ನಮ್ಮ ಒಂದು ಕಲ್ಪವು ಶ್ರೀ ಬ್ರಹ್ಮ ದೇವರಿಗೆ ಕೇವಲ ಒಂದು ದಿನ ಮಾತ್ರ ಆಗಿರುತ್ತದೆ (ಇದು ಶ್ರೀ ಬ್ರಹ್ಮ ದೇವರ ಗ್ರಹದ ಪ್ರಕಾರವಾಗಿ).

ಇದು ಒಂದು ಚಕ್ರವಾಗಿರುತ್ತದೆ ಮತ್ತು ಈ ಚಕ್ರವು ಯಾವಾಗಲೂ ತಿರುಗುತ್ತಿರುತ್ತದೆ.

ಕಲ್ಪವು ಮುಗಿಯುತ್ತಿದ್ದಂತೆ ಪ್ರತಿಯೊಬ್ಬ ಶ್ರೀ ಬ್ರಹ್ಮ ದೇವರು ಮುಕ್ತನಾಗುತ್ತಾರೆ ಮತ್ತು ಬ್ರಹ್ಮಾಂಡವೂ ನಾಶವಾಗುತ್ತದೆ. 

ಇದರ ನಂತರ, ಮತ್ತೊಂದು ಹೊಸ ಬ್ರಹ್ಮಾಂಡ ರಚನೆಯಾಗುತ್ತದೆ, ಅಂದರೆ ಮತ್ತೊಂದು ಶ್ರೀ ಬ್ರಹ್ಮ ದೇವರಿಂದ ಮತ್ತೊಂದು ಬ್ರಹ್ಮಾಂಡ ಹುಟ್ಟುತ್ತದೆ.

ಇಂತಹ ಅನಂತಾನಂತ ಕಲ್ಪಗಳು ಬಂದಿವೆ, ಮತ್ತು ಇಂತಹ ಅನಂತಾನಂತ ಶ್ರೀ ಬ್ರಹ್ಮ ದೇವರುಗಳು ಬಂದಿದ್ದಾರೆ.

ಇದೇ ರೀತಿ ಅನಂತಾನಂತ ಶ್ರೀ ಸರಸ್ವತಿ ದೇವಿಯರುಗಳು, ಶ್ರೀ ರುದ್ರ ದೇವರುಗಳು, ಶ್ರೀ ಪಾರ್ವತಿ ದೇವಿಯರುಗಳೂ, ಶ್ರೀ ಇಂದ್ರ ದೇವರುಗಳು, ಶ್ರೀ ಸೂರ್ಯ ದೇವರುಗಳು ಮುಂತಾದವರು ಬಂದಿದ್ದಾರೆ. 

ಕೇವಲ ಶ್ರೀ ಹರಿ ಮತ್ತು ಅವರ ಪತ್ನಿಯಾದ ಶ್ರೀ ಮಹಾಲಕ್ಷ್ಮಿ ದೇವಿಯವರು ಜನನದ ಬಗ್ಗೆ ಯಾರಿಗೂ ತಿಳಿದಿಲ್ಲ.

ಆದರೆ, ಶ್ರೀ ಮಹಾಲಕ್ಷ್ಮಿ ದೇವಿ “ಅಂಭ್ರೂಣಿ ಸೂಕ್ತ” ದಲ್ಲಿ ಶ್ರೀ ಹರಿ ಸ್ವತಃ ಪರಬ್ರಹ್ಮ ಮತ್ತು ಅವರು ಶ್ರೀ ಹರಿಯ ಸೇವಕಿ ಎಂದು ಹೇಳುತ್ತಾರೆ.

ನಮ್ಮ ಧರ್ಮಕ್ಕೆ ಯಾವ ಪ್ರಾರಂಭವೂ ಇಲ್ಲ ಹಾಗೂ ಅಂತ್ಯವೂ ಇಲ್ಲ.

ಏಕೆಂದರೆ, ಶ್ರೀ ಹರಿಯ ಹುಟ್ಟಿನ ಬಗ್ಗೆ, ಶ್ರೀ ಹರಿಗೆ ಏಕೆ ಜನ್ಮವಿಲ್ಲ (ಅಂದರೆ, ಶ್ರೀ ಹರಿಗೆ ತಂದೆ ತಾಯಂದಿರು ಇಲ್ಲ) ಎಂಬುದರ ಬಗ್ಗೆ ಯಾರಿಗೂ ತಿಳಿದಿಲ್ಲ.

ಇದರರ್ಥ, ನಮ್ಮ ಧರ್ಮವು ಪ್ರಾರಂಭವಾಗಿ ಎಷ್ಟು ವರ್ಷಗಳಾಗಿವೆ ಎಂಬುದರ ಬಗ್ಗೆ ಯಾರಿಗೂ ತಿಳಿದಿಲ್ಲ, ಶ್ರೀ ಹರಿಗೆ ಮಾತ್ರ ತಿಳಿದಿದೆ ಮತ್ತು ಯಾರಿಗೂ ತಿಳಿದಿಲ್ಲ.

ಶ್ರೀ ಹರಿ ಮೊದಲು ಶ್ರೀ ಮಹಾಲಕ್ಷ್ಮಿ ದೇವಿಗೆ ವೇದಗಳ ದೀಕ್ಷೆ ನೀಡಿದರು. ಇದರ ನಂತರ ಶ್ರೀ ಹರಿ ಶ್ರೀ ಬ್ರಹ್ಮ ದೇವರಿಗೆ ದೀಕ್ಷೆ ನೀಡುತ್ತಾರೆ.

ಇದರ ನಂತರ, ಶ್ರೀ ಬ್ರಹ್ಮ ದೇವರು ತನ್ನ ಎಲ್ಲಾ ಮಾನಸ ಪುತ್ರರಿಗೆ ದೀಕ್ಷೆ ನೀಡುತ್ತಾರೆ.

ಶ್ರೀ ಬ್ರಹ್ಮ ದೇವರಿಗೆ ಅನೇಕ ಮಾನಸ ಪುತ್ರರಿದ್ದಾರೆ, ಅವರಲ್ಲಿ ಭೃಗು, ಪುಲ್ಹಾ, ಕ್ರತು, ಅಂಗೀರಾ, ಮಾರಿಚಿ, ದಕ್ಷಾ, ಅತ್ರಿ, ವಸಿಷ್ಠ, ಸನತ ಕುಮಾರರುಗಳು, ರುದ್ರ ದೇವರು ಮುಂತಾದವರಿಗೆ ದೀಕ್ಷೆ ನೀಡುತ್ತಾರೆ.

ನೀವೇ ಯೋಚಿಸಿ, ನಮ್ಮ ಸನಾತನ ಧರ್ಮದ ಶ್ರೇಷ್ಠತೆಯು ಎಷ್ಟು ದೊಡ್ಡದ್ದಾಗಿದೆ ಎಂದರೆ, ನಮ್ಮಂತಹ ಕ್ಷುಲ್ಲಕ ಮನುಷ್ಯರಿಗೆ ಅದರ ಬಗ್ಗೆ ಯೋಚಿಸಲೂ ಸಾಧ್ಯವಾಗುವುದಿಲ್ಲ.

ಆದರೆ, ಇಂದಿನ ಕಾಲದಲ್ಲಿ ಏಕೆ ಅನೇಕ ರಿಲಿಜನ್‌ / religion ಇವೆ ಮತ್ತು ಅವು ಹೇಗೆ ಹುಟ್ಟಿದವು ಎಂದು ನಾವು ಅನುಮಾನಿಸಬಹುದು?

ಇದು ಸನಾತನ ಧರ್ಮದ ಜನರಿಗೆ ಯಾವುದೇ ಹೊಸ ಅಥವಾ ದೊಡ್ಡ ವಿಷಯವಲ್ಲ ಎಂಬುದನ್ನು ನಾವು ನೆನಪಿನಲ್ಲಿಡಬೇಕು.

ಇದಕ್ಕೂ ಮುಂಚೆಯೇ ರಾಕ್ಷಸರು / ಜನರಾದ ಹಿರಣ್ಯಕಶಿಪು, ಪೌಂಡರಿಕ, ಕಂಸ, ರಾವಣ, ಶಿಶುಪಾಲ, ದಂತವಕ್ರ, ತಾರಕಾಸುರ, ಭಸ್ಮಾಸುರ, ವೇಣಾ, ಮುಂತಾದವರು ಬಂದಿದ್ದಾರೆ ಮತ್ತು ಅವರೆಲ್ಲರೂ ನಾಶರಾಗಿದ್ದಾರೆಂಬುದೂ ಸಹ ನಮಗೆ ತಿಳಿದಿರಬೇಕು.

ಈಗಲೂ ಸಹ ಈ ಭೂಮಿಯ ಮೇಲೆ ಅದೇ ರೀತಿಯ ರಾಕ್ಷಸರು / ಜನರು ಇನ್ನೂ ಇದ್ದಾರೆ ಮತ್ತು ಮತ್ತಷ್ಟು ಅಂತಹ ರಾಕ್ಷಸರು / ಜನರು ಮುಂದೆಯೂ ಬರುತ್ತಾರೆ.

ಆದರೆ, ನಾವು ಭಯಪಡುವ ಅಗತ್ಯವಿಲ್ಲ, ಏಕೆಂದರೆ ಈ ರೀತಿಯ ರಾಕ್ಷಸ ಸ್ವಭಾವದ ಜನರು ಹೇಗೆ ಹುಟ್ಟಿ ಬರುತ್ತಾರೆಯೋ ಅದೇ ರೀತಿಯ ಅಂತ್ಯವನ್ನೂ ಸಹ ಹೊಂದುತ್ತಾರೆ.

ಹಾಗೆಯೇ, ಇಂದು ಇರುವ ಈ ರಿಲಿಜನ್‌ಗಳು / religion ಸಹ ನಾಶವಾಗಬೇಕಿದೆ ಮತ್ತು ಅದು ನಾಶವಾಗಿಯೇ ತೀರುತ್ತದೆ ಮತ್ತು ಮುಂದೆ ಹೊಸ ಹೊಸ ರಿಲಿಜನ್‌ಗಳು / religion ಮತ್ತೆ ಪ್ರಾರಂಭವಾಗುತ್ತವೆ. 

ಆದರೆ, ಸನಾತನ ಧರ್ಮವನ್ನು ಯಾರೂ ಹಾಳುಮಾಡಲು ಸಾಧ್ಯವಿಲ್ಲ.

ಇಂದಿನವರೆಗೂ ಸಹ, ಯಾರೂ ನಮ್ಮ ಸರ್ವೋತ್ತಮ ಧರ್ಮವನ್ನು ಏನನ್ನೂ ಮಾಡಲು ಸಾಧ್ಯವಾಗಲಿಲ್ಲ ಮತ್ತು ಭವಿಷ್ಯದಲ್ಲಿಯೂ ಯಾರೂ ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ.

ಇದರ ಉದಾಹರಣೆಯನ್ನು ನೀವು ಇಂದಿಗೂ ನೋಡಬಹುದು.

ಭೂಮಿಯ ಮೇಲೆ ಅನೇಕ ದೇಶಗಳಿವೆ, ಅಲ್ಲಿ ಮೊದಲು ಪ್ರತ್ಯೇಕ ಧರ್ಮಗಳು ಇದ್ದವು, ಆದರೆ ಇಂದು ಬೇರೆ ಧರ್ಮಗಳಿವೆ. 

ನಿನ್ನೆ ಪ್ರತ್ಯೇಕ ನಂಬಿಕೆ ಇತ್ತು, ಇಂದು ಬೇರೆ ನಂಬಿಕೆ ಇದೆ ಹಾಗೂ ಮತ್ತೆ ನಾಳೆ ಮತ್ತೊಂದು ನಂಬಿಕೆ ಇರುತ್ತದೆ. 

ಇದು ಹೀಗೇ ಮುಂದುವರೆಯುತ್ತದೆ  ಮತ್ತು ಇದರ ಬಗ್ಗೆ ನಮಗೆ ಚಿಂತೆ ಇರಬಾರದು, ಏಕೆಂದರೆ ಇದೆ ನಮ್ಮ ಶ್ರೀ ಹರಿಯ ಲೀಲೆ. 

ಜಗತ್ತಿನಲ್ಲಿ ಎಲ್ಲರೂ ಒಳ್ಳೆಯವರಾಗಿರಲು ಸಾಧ್ಯವಿಲ್ಲ. ಸನಾತನ ಧರ್ಮವನ್ನು ಒಪ್ಪುವ ಜನರೂ ಇರುತ್ತಾರೆ,

ಹಾಗೆಯೆ ಸನಾತನ ಧರ್ಮದ ಬಗ್ಗೆ ಕೀಳು ಅಭಿಪ್ರಾಯ ಹೊಂದಿರುವ ಜನರೂ ಇರುತ್ತಾರೆ. ಮತ್ತೆ ಹೇಳುತ್ತಿದ್ದೇನೆ, ಇದು ಸನಾತನ ಧರ್ಮದವರಿಗೆ ಹೊಸದೇನಲ್ಲ.

ಆದರೆ, ನಿನ್ನೆಯೂ ಒಂದೇ ಸನಾತನ ಧರ್ಮವಿತ್ತು, ಇಂದು ಕೇವಲ ಒಂದೇ ಸನಾತನ ಧರ್ಮವಿರುವುದು ಮತ್ತು ನಾಳೆಯೂ ಸಹ ಕೇವಲ ಒಂದೇ ಸನಾತನ ಧರ್ಮವಿರುವ ಏಕೈಕ ದೇಶವೆಂದರೆ ನಮ್ಮ ಭಾರತ ದೇಶ.

ಇದರ ಬಗ್ಗೆ ಯಾವುದೇ ಅನುಮಾನವಿಲ್ಲ.

ನಮಗೆ ನಮ್ಮ ದೇಶದ ಕುರಿತು ಮತ್ತು ನಮ್ಮ ಸನಾತನ ಧರ್ಮದ ಕುರಿತು ಅಪಾರವಾದ ಅಭಿಮಾನವಿರಬೇಕ ಅಷ್ಟೆ.

ಈ ಪೋಸ್ಟ್‌ಗೆ ನಿಯಮಿತವಾಗಿ ಹೆಚ್ಚಿನ ಮಾಹಿತಿಯನ್ನು ಸೇರಿಸಲಾಗುತ್ತದೆ. ಸ್ವಲ್ಪ ಸಮಯದ ನಂತರ ದಯವಿಟ್ಟು ಈ ಪೋಸ್ಟ್‌ಗೆ ಪುನಃ ಭೇಟಿ ನೀಡಿ.

To watch videos on #Hinduism #Sanskrit language, SUBSCRIBE to my YouTube channel from this below link:

#BhagavanBhakthi YouTube channel

ಹಿಂದೂ (ಸನಾತನ) ಧರ್ಮ ಬಗ್ಗೆ ಮಾಹಿತಿ, ಸಂಗತಿಗಳು, ಹಿರಿಮೆ, ಮಹತ್ವ, ಪ್ರಾಮುಖ್ಯತೆ, ಇತ್ಯಾದಿ” ಕುರಿತು ಇನ್ನಷ್ಟು ತಿಳಿದುಕೊಳ್ಳಲು, ದಯವಿಟ್ಟು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:

ಹಿಂದೂ (ಸನಾತನ) ಧರ್ಮ ಬಗ್ಗೆ ಮಾಹಿತಿ, ಸಂಗತಿಗಳು, ಹಿರಿಮೆ, ಮಹತ್ವ, ಪ್ರಾಮುಖ್ಯತೆ, ಇತ್ಯಾದಿ

ಆತ್ಮೀಯ ಸ್ನೇಹಿತರೇ, ಈ ಪೋಸ್ಟ್ ಬಗ್ಗೆ ನಿಮಗೆ ಯಾವುದೇ ಸ್ಪಷ್ಟೀಕರಣಗಳು ಬೇಕಾದರೆ, ದಯವಿಟ್ಟು ನನಗೆ ತಿಳಿಸಿ, ನಾನು ಖಂಡಿತವಾಗಿಯೂ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸುತ್ತೇನೆ.

ನಿಮ್ಮ ಒಂದು ಲೈಕ್, ಒಂದು ಕಾಮೆಂಟ್, ಒಂದು ಶೇರ್‌, ಒಂದು ಸಬ್‌ಸ್ಕ್ರಿಪ್ಷನ್ ತುಂಬಾ ಹೆಚ್ಚು ಮುಖ್ಯವಾಗುತ್ತದೆ.

ಇದು ಈ ವಿಷಯದ ಗುಣಮಟ್ಟವನ್ನು ತಿಳಿಯಲು ಸಹಾಯ ಮಾಡುತ್ತದೆ ಮತ್ತು ವಿಷಯಕ್ಕೆ ಯಾವುದೇ ಸುಧಾರಣೆಗಳು ಅಗತ್ಯವಿದೆಯೇ ಎಂದು ತಿಳಿಯಲು ಸಹಕಾರಿಯಾಗುತ್ತದೆ.

ಈ ವಿಷಯವು ನಿಮಗೆ ಉಪಯುಕ್ತವಾಗಿದೆ ಮತ್ತು ನಿಮ್ಮ ಜ್ಞಾನವನ್ನು ಹೆಚ್ಚಿಸಲು ನಿಮಗೆ ಸಹಾಯ ಮಾಡಿದೆ ಎಂದು ನೀವು ಭಾವಿಸಿದರೆ, ಇದನ್ನು ನಿಮ್ಮ ಹಿತೈಷಿಗಳೊಂದಿಗೆ ದಯವಿಟ್ಟು ಶೇರ್‌ ಮಾಡಿಕೊಳ್ಳಿ.

ಏಕೆಂದರೆ ಶೇರ್‌ ಮಾಡುವುದೆಂದರೆ ಕೇರ್‌ ಮಾಡುವುದು ಎಂದರ್ಥ.

#BhagavanBhakthi ಯ ಬಗ್ಗೆ ಉಚಿತ ಇ-ಮೇಲ್ ಚಂದಾದಾರಿಕೆಯನ್ನು ಪಡೆಯಲು, ನಿಮ್ಮ ಇ-ಮೇಲ್ ID ಯಿಂದ [email protected] ಗೆ ಇ-ಮೇಲ್ ಕಳುಹಿಸಬಹುದು.

ವಂದನೆಗಳು!

ಶ್ರೀ ಗುರುಭ್ಯೋ ನಮಃ

ಓಂ ನಮೋ ನಾರಾಯಣಾಯ

ಶ್ರೀ ಕೃಷ್ಣಾರ್ಪಣಮಸ್ತು

Subscribe / Follow us
Share in Social Media

Leave a Reply

Your email address will not be published. Required fields are marked *