ಪೂಜೆ ಮಾಡುವಾಗ ಮಂಗಳಾರತಿ, ಶಂಖ, ಗಂಟೆ, ಜಾಗಟೆಯ ಶಬ್ಧದ ಮಹತ್ವ | ಪೂಜೆ ಮಾಡುವಾಗ ಶಂಖ ಏಕೆ ಊದುತ್ತಾರೆ | ಪೂಜೆ ಮಾಡುವಾಗ ಗಂಟೆ ಏಕೆ ಬಾರುಸುತ್ತಾರೆ | ಪೂಜೆ ಮಾಡುವಾಗ ಜಾಗಟೆ ಏಕೆ ಬಾರುಸುತ್ತಾರೆ | Why Mangalarati (Magala Arati) Shankha Ghanthe sound is done during pooje in Kannada

ನಮಸ್ತೆ ನನ್ನ ಆತ್ಮೀಯ ಸ್ನೇಹಿತರೇ, ನೀವು ಇಂದು ಹೇಗಿದ್ದೀರಿ? #BhagavanBhakthi ವೆಬ್‌ಸೈಟ್ / ಬ್ಲಾಗ್‌ಗೆ ಸುಸ್ವಾಗತ.

ಭಗವಂತ ಶ್ರೀ ವಿಷ್ಣುವಿನ ಮತ್ತು ಗಣೇಶನ ಆಶೀರ್ವಾದವು ನಿಮ್ಮ ಮತ್ತು ನಿಮ್ಮ ಕುಟುಂಬದೊಂದಿಗೆ ಸದಾ ಇರಲಿ!

ಈ ವೆಬ್‌ಸೈಟ್ / ಬ್ಲಾಗ್‌ನಲ್ಲಿ, ನೀವು ಯಾವಾಗಲೂ #ಹಿಂದೂಧರ್ಮ #ಸಂಸ್ಕೃತ ಭಾಷೆಯ ಬಗ್ಗೆ ಕಲಿಯುತ್ತೀರಿ.

#ಹಿಂದೂಧರ್ಮ #ಸಂಸ್ಕೃತ ಭಾಷೆಯ ಕುರಿತು ವೀಡಿಯೊಗಳನ್ನು ವೀಕ್ಷಿಸಲು ನನ್ನ YouTube ಚಾನೆಲ್ #BhagavanBhakthi ಗೆ ಉಚಿತ ಚಂದಾದಾರರಾಗಿ.

ಪೂಜೆ ಮಾಡುವಾಗ ಮಂಗಳಾರತಿ, ಶಂಖ, ಗಂಟೆ, ಜಾಗಟೆಯ ಶಬ್ಧದ ಮಹತ್ವ | ಪೂಜೆ ಮಾಡುವಾಗ ಶಂಖ ಏಕೆ ಊದುತ್ತಾರೆ | ಪೂಜೆ ಮಾಡುವಾಗ ಗಂಟೆ ಏಕೆ ಬಾರುಸುತ್ತಾರೆ | ಪೂಜೆ ಮಾಡುವಾಗ ಜಾಗಟೆ ಏಕೆ ಬಾರುಸುತ್ತಾರೆ | Why Mangalarati (Magala Arati) Shankha Ghanthe sound is done during pooje in Kannada” ಬಗ್ಗೆ ತಿಳಿದುಕೊಳ್ಳುವ ಮೊದಲು, ನಾವು ಕೆಲ ಮೂಲಭೂತ ಮಾಹಿತಿಯನ್ನು ತಿಳಿದುಕೊಳ್ಳೋಣ.

ಪೂಜೆ ಮಾಡುವಾಗ ನಾವು ಮಂಗಳಾರತಿ ಏಕೆ ಮಾಡುತ್ತೇವೆ? ಪೂಜೆ ಮಾಡುವಾಗ ನಾವು ಶಂಖವನ್ನು ಏಕೆ ಊದುತ್ತೇವೆ?

ಪೂಜೆ ಮಾಡುವಾಗ ನಾವು ಗಂಟೆಯ ಶಬ್ಧವನ್ನು ಏಕೆ ಬಾರಿಸುತ್ತೇವೆ? ಪೂಜೆ ಮಾಡುವಾಗ ನಾವು ಜಾಗಟೆಯನ್ನು ಏಕೆ ಬಾರಿಸುತ್ತೇವೆ?

ನಾವು ಭಗವಂತ ಶ್ರೀ ಹರಿ / ಶ್ರೀ ರಾಮ / ಶ್ರೀ ಕೃಷ್ಣ ಮತ್ತೆ ಯಾವುದೇ ದೇವತೆಗಳ ಅತ್ಯಂತ ಶುಭವಾದ ಪರಮ ಮಂಗಳವಾದ ಮಂಗಳಾರತಿ ಪೂಜೆಯನ್ನು ಮಾಡುವಾಗ, 

ಅತ್ಯಂತ ಪರಮ ಮಂಗಳವಾದ ಮಂಗಳಾರತಿಯ ಬೆಳಕಿನಿಂದ ನಾವು ಭಗವಂತನ ಅಥವಾ ದೇವತೆಗಳ ನೇರ ದರ್ಶನವನ್ನು ಪಡೆಯಬಹುದು (ಯಾರಿಗೆ ನಾವು ಪೂಜೆ ಮಾಡುತ್ತಿದ್ದೇವೊ ಅವರ ದರ್ಶನ). 

ಭಗವಂತನ (ಅಥವಾ ದೇವತೆಗಳ) ಶಾಲಿಗ್ರಾಮದ ಮೂಲಕ ಅಥವಾ ಪ್ರತಿಮೆಯ ಮೂಲಕ ಅಥವಾ ಚಿತ್ರಫಟದ (ಫೋಟೋದ) ಮೂಲಕ, 

ನಾವು ಭಗವಂತನ (ಅಥವಾ ದೇವತೆಗಳ) ಅತ್ಯಂತ ಶುಭವಾದ ಪರಮ ಮಂಗಳ (ಅತ್ಯಂತ ಶುಭ) ದರ್ಶನವನ್ನು ಮಾಡಬಹುದು.

ಇದನ್ನು ಮಾಡುವುದರಿಂದ, ಮುಂದಿನ ಏಳು ಜನುಮಗಳಲ್ಲಿ ಭಗವಂತನ ಭಕ್ತರಾಗಿ ಮರುಜನ್ಮ ಪಡೆಯುವ ಅವಕಾಶ ನಮಗೆ ಸಿಗುತ್ತದೆ, ಅಂದರೆ, ನಮ್ಮ ಮಹಾನ್ ಸನಾತನ ಧರ್ಮಶಾಸ್ತ್ರದ ಪ್ರಕಾರವಾಗಿ ವೈಷ್ಣವನಾಗಿ ಮರುಜನ್ಮ ಪಡೆಯುವ ಅವಕಾಶ ನಮಗೆ ಸಿಗುತ್ತದೆ.

ಕೇವಲ ಒಂದು ಮಂಗಳಾತಿ ಮಾಡುವುದು ಎಂದರೆ, ಮುಂದಿನ ಏಳು ಜನ್ಮಗಳಲ್ಲಿ ಶ್ರೀ ಹರಿ / ಶ್ರೀ ರಾಮ / ಶ್ರೀ ಕೃಷ್ಣನ ವೈಷ್ಣವ ಭಕ್ತನಾಗಿ ನಾವು ಮರುಜನ್ಮ ಪಡೆಯುತ್ತೇವೆ.

ಈ ಅತ್ಯಂತ ಶುಭವಾದ ಪರಮ ಮಂಗಳ (ಅತ್ಯಂತ ಶುಭ) ಸಮಯದಲ್ಲಿ, ಅಸುರರು / ರಾಕ್ಷಸರುಗಳ ಪ್ರವೇಶವನ್ನು ಯಾರೂ ಬಯಸುವುದಿಲ್ಲ (ಇದು ಪೂಜೆ ಮಾಡಿದ ನಂತರ ಅಥವಾ ಮೊದಲ ಸಮಯವನ್ನು ಸಹ ಅನ್ವಯಿಸುತ್ತದೆ). 

ಈ ಅಸುರರು / ರಾಕ್ಷಸರುಗಳಿಂದ ಹಾನಿಗೊಳಗಾಗಲು ನಾವು ಬಯಸುವುದಿಲ್ಲ.

(ಈ ಕಲಿಯುಗದಲ್ಲಿ ಅಸುರರು / ರಾಕ್ಷಸರೂ ಸಹ ಮನುಷ್ಯರಂತೆ ಇರುತ್ತಾರೆ, ಆದ್ದರಿಂದ ನಾವು ನಮ್ಮ ಇಡೀ ಜೀವನದಲ್ಲಿ ಮತ್ತು ಶಾಶ್ವತವಾಗಿ ಈ ರೀತಿಯ ಅಸುರ / ರಾಕ್ಷಸರುಗಳನ್ನು ದೂರವಿಡಬೇಕು).

ಈ ರೀತಿಯ ಜನರೊಂದಿಗೆ ಸಂಪರ್ಕದಲ್ಲಿರಲು ನಾವು ಬಯಸುವುದಿಲ್ಲ. ಹಾಗಾಗಿ, ನಾವು ಅತ್ಯಂತ ಶುಭವಾದ ಪರಮ ಮಂಗಳವಾದ ಮಂಗಳಾರತಿ ಮಾಡುವಾಗ ಶಂಖ, ಗಂಟೆ, ಜಾಗಟೆ ಶಬ್ದವನ್ನು ಮಾಡಬೇಕು.

ಎಲ್ಲಿ ಶಂಖ, ಗಂಟೆ, ಜಾಗಟೆ ಶಬ್ಧಗಳನ್ನು ಮಾಡಲಾಗುತ್ತದೆಯೋ, ಈ ರೀತಿಯ ಸ್ಥಳಗಳಲ್ಲಿ ಅಸುರರು / ರಾಕ್ಷಸರುಗಳು ಇರುವುದಿಲ್ಲ.

ಶಂಖ, ಗಂಟೆ, ಜಾಗಟೆಯ ಅತ್ಯಂತ ಪರಮ ಮಂಗಳ ಮತ್ತು ಶುಭ ಶಬ್ಧಗಳನ್ನು ಅವರು ಕೇಳುವುದನ್ನು ಸಹಿಸಲಾರರು. ಈ ಅತ್ಯಂತ ಪರಮ ಮಂಗಳ ಮತ್ತು ಶುಭವಾದ ಶಬ್ಧಗಳನ್ನು ಅವರು ಕೇಳಲು / ಸಹಿಸಲು ಸಾಧ್ಯವಿಲ್ಲ.

ಶಂಖ, ಗಂಟೆ, ಜಾಗಟೆಯ ಈ ರೀತಿಯಾದ ಅತ್ಯಂತ ಪರಮ ಮಂಗಳ ಮತ್ತು ಶುಭ ಶಬ್ಧಗಳನ್ನು ಅವರು ಸಹಿಸಲಾರರು.

ಆದರೆ, ಈ ಪರಮ ಮಂಗಳ ಶಬ್ಧಗಳು ನಮ್ಮ ಭಗವಂತ ಶ್ರೀ ಹರಿ / ಶ್ರೀ ರಾಮ / ಶ್ರೀ ಕೃಷ್ಣ ಮತ್ತು ಬೇರೆಯ ದೇವತೆಗಳಿಗೆ ತುಂಬಾ ತುಂಬಾನೇ ಪ್ರಿಯಕರವಾಗಿವೆ. 

ನಾವು ಶ್ರೀ ಹರಿ / ಶ್ರೀ ರಾಮ / ಶ್ರೀ ಕೃಷ್ಣ ಮತ್ತು ದೇವತೆಗಳನ್ನು ಸಂತೋಷಪಡಿಸಬೇಕು. ಅದಲ್ಲದೆ, ನಮ್ಮಿಂದ ಶಾಶ್ವತವಾಗಿ ನಾವು ಅಸುರ / ರಾಕ್ಷಸ ಸ್ವಭಾವ ಮತ್ತು ಆ ರೀತಿಯ ಮನಸ್ಸುಳ ಜನರಿಂದ ದೂರವಿರಬೇಕು. 

ಮೇಲಿನ ಎರಡೂ ಕಾರಣಗಳಿಗೆ ಪರಿಹಾರವು ಕೇವಲ ಒಂದೇ ಒಂದು. 

ಅತ್ಯಂತ ಭಕ್ತಿಯಿಂದಶ್ರೀ ಹರಿ / ಶ್ರೀ ರಾಮ / ಶ್ರೀ ಕೃಷ್ಣ ಮತ್ತು ದೇವತೆಗಳ ಅತ್ಯಂತ ಶುಭ ಮತ್ತು ಪರಮ ಮಂಗಳವಾದ ಮಂಗಳಾರತಿಯನ್ನುಮೇಲೆ ತಿಳಿಸಿದಂತೆ ಶಂಖಗಂಟೆ ಮತ್ತು ಜಾಗಟೆಗಳ ಶಬ್ಧಗಳಿಂದ ಮಾಡಿ. 

ಇದು, ಶ್ರೀ ಹರಿ / ಶ್ರೀ ರಾಮ / ಶ್ರೀ ಕೃಷ್ಣ ಮತ್ತು ದೇವತೆಗಳನ್ನು ಸಂತೋಷಪಡಿಸುತ್ತದೆ. 

ಅದೇ ರೀತಿಯಲ್ಲಿ, ಎಲ್ಲಾ ಅಸುರರು / ರಾಕ್ಷಸ ಸ್ವಭಾವ ಮತ್ತು ಮನಸ್ಸುಳ ಜನರು ನಮ್ಮಿಂದ ಶಾಶ್ವತವಾಗಿ ದೂರ ಹೋಗುತ್ತಾರೆ. 

ನೆನಪಿಡಿಈ ಅದ್ಭುತವಾದ ಪ್ರಯೋಜನಗಳನ್ನು ಪಡೆಯಲು ನಾವು ಪ್ರತಿದಿನ ಪೂಜೆಯನ್ನು ಮಾಡಬೇಕಾಗಿದೆ. 

ಹಾಗಾದರೆ ನೀವು ಏಕೆ ಕಾಯುತ್ತಿದ್ದೀರಿ. 

ಶ್ರೀ ಹರಿ / ಶ್ರೀ ರಾಮ / ಶ್ರೀ ಕೃಷ್ಣ ಮತ್ತು ಬೇರೆಯ ದೇವತೆಗಳ ಅತ್ಯಂತ ಶುಭ ಮತ್ತು ಪರಮ ಮಂಗಳ ಮಂಗಳಾತಿ ಮಾಡುವುದನ್ನು ಮುಂದುವರಿಸಿ. 

ಇದರಿಂದ, ಎಲ್ಲಾ ರೀತಿ ಅಸುರರು / ರಕ್ಷಾ ಸ್ವಭಾವ ಮತ್ತು ಮನಸ್ಸುಳ ಜನರು ನಮ್ಮಿಂದ ಶಾಶ್ವತವಾಗಿ ದೂರ ಹೋಗುತ್ತಾರೆ. 

ಅತ್ಯಂತ ಭಕ್ತಿಯಿಂದ, ಶ್ರೀ ಹರಿ / ಶ್ರೀ ರಾಮ / ಶ್ರೀ ಕೃಷ್ಣ ಮತ್ತು ಬೇರೆಯ ದೇವತೆಗಳ ಅತ್ಯಂತ ಶುಭ ಮತ್ತು ಪರಮ ಮಂಗಳವಾದ ಮಂಗಳಾರತಿ ಮಾಡಲು ಪ್ರಾರಂಭಿಸಿ. 

ಅತ್ಯಂತ ಭಕ್ತಿಯಿಂದ, ಇಂದಿನಿಂದಲೇ ಮತ್ತು ಈಗಿನಿಂದಲೇ ಶಂಖ, ಗಂಟೆ, ಜಾಗಟೆಯ ಶುಭ ಮತ್ತು ಅತ್ಯಂತ ಪರಮ ಮಂಗಳ ಶಬ್ಧಗಳನ್ನು ಮಾಡಲು ಪ್ರಾರಂಭಿಸಿ. 

ಶ್ರೀ ಹರಿ / ಶ್ರೀ ರಾಮ / ಶ್ರೀ ಕೃಷ್ಣನನ್ನು ಮತ್ತು ದೇವತೆಗಳನ್ನು ಸಂತೋಷಪಡಿಸೋಣ. 

ಎಲ್ಲಾ ರೀತಿಯ ಅಸುರರು / ರಾಕ್ಷಸ ಸ್ವಭಾವದ ಜನರು ನಮ್ಮಿಂದ ದೂರ ಓಡಿಹೋಗಲಿ. 

ಈ ಮಧ್ಯೆ, ನಾವು ಯಾರಿಗೂ ತೊಂದರೆ ನೀಡಬಾರದು ಎಂಬುದನ್ನು ನೆನಪಿನಲ್ಲಿಡಿ. 

ಈಗ ಶಂಖದ ಮಹತ್ವದ ಬಗ್ಗೆ ಇನ್ನೂ ಹೆಚ್ಚಾಗಿ ತಿಳಿಯೋಣ:

ಪ್ರಾಚೀನ ಕಾಲದಿಂದಲೂ ಹಿಂದೂಗಳಿಗೆ ಅತ್ಯಂತ ಪೂಜನೀಯ ವಸ್ತು ಶಂಖ. ಮಹಾತ್ಮರುˌ ರಾಜರು ದೇವದೇವತೆಗಳ ಜನನವನ್ನು ಹಿಂದೆ ಶಂಖನಾದದ ಮೂಲಕವೇ ಷೋಷಿಸುತ್ತಿದ್ದರು 

ಮಹರ್ಷಿಗಳು ಹಾಗೂ ಚಕ್ರವರ್ತಿಗಳ ಆಗಮವನ್ನು ಸೂಚಿಸಲೂ ಶಂಖವನ್ನು ಬಳಸಲಾಗುತ್ತಿತ್ತು.

ಭಾರತದ ಕೆಲವು ಭಾಗಗಳಲ್ಲಿ ಕೆಲವು ಪಂಗಡದವರು ಶವದ ಅಂತಿಮಯಾತ್ರೆಯ ಸಮಯ ದಲ್ಲೂ ಶಂಖನಾದ ಮಾಡುವ ಪದ್ದತಿ ಯುಂಟು. 

ತಂತಿವಾದ್ಯ, ಶಂಖ, ನಾದಸ್ವರ, ಕೊಂಬು ಹಾಗೂ ತಾಳ ಇವುಗಳಿಂದ ಹೊರಡುವ ಶಬ್ಧಗಳನ್ನು ಪಂಚಮಹಾಶಬ್ಧಗಳು ಎಂದು ಎನ್ನುತ್ತಾರೆ.

ಮೂರರಿಂದ ಆರನೇ ಶತಮಾನದವರೆವಿಗೂ ಕೆಲವು ಚಕ್ರವರ್ತಿಗಳು ಪಂಚ ಮಹಾಶಬ್ದ ಎಂಬ ಬಿರುದುಗಳನ್ನು ಗಳಿಸುತ್ತಿದ್ದರು.

ಕೆಲವು ರಾಜರು ತಮ್ಮ ಕೈ ಕೆಳಗಿನ ಮಹಾವೀರರೂˌ ಅನುಯಾಯಿಗಳೂ ಆದವರಿಗೆ ಈ ಹೆಸರಿನ ಬಿರುದುಗಳನ್ನು ಕೊಡುತ್ತಿದ್ದರೆಂದು ಪ್ರಾಚೀನ ಬರಹ ಗಳಿಂದ ತಿಳಿದುಬರುತ್ತದೆ.

ಹಿಂದೂ ಪುರಾಣಗಳ ಪ್ರಕಾರ ಹದಿ ನೆಂಟು ವಾದ್ಯಗಳಲ್ಲಿ ಶಂಖವಾದ್ಯವೂ ಒಂದು. ಆದ್ದರಿಂದಲೇ ಇದನ್ನು ಊದುವುದಲ್ಲದೆˌ ಮನೆ ಹಾಗೂ ದೇವಸ್ಥಾನಗಳಲ್ಲಿ ದೇವರ ಅಭಿಷೇಕಕ್ಕೆ ಇದರ ಮೂಲಕವೇ ನೀರನ್ನು ಸುರಿಯಲಾಗುತ್ತದೆ. 

“ಶಂಖಂ ಚಂದ್ರಾರ್ಕ ದೈವತ್ವಂ ಮಧ್ಯೇ ವರುಣದೈವತವೃಷ್ಟೇ ಪ್ರಜಾವತೆ ನತ್ಪಂ ಏತತ್ ಶಂಖಂ ವ್ರವೂಜಯೇತ್” ಎಂಬ ಶಂಖವನ್ನು ಪೂಜಿಸುವ ಶ್ಲೋಕ ಪೂಜೆಯಲ್ಲಿ ಶಂಖದ ಮಹತ್ವವನ್ನು ಸಾರುತ್ತದೆ. 

ಶಂಖಗಳಲ್ಲಿ ವಾಲಂಪುರಿ, ಇದಾಂಪುರಿ, ಚಾಲಂಕಾಲಮ್ ಹಾಗೂ ಪಾಂಚಜನ್ಯಂ ಎಂಬುದಾಗಿ ನಾಲ್ಕು ವಿಧಗಳಿವೆ.

ತಮಿಳುನಾಡಿನ ಕೆಲವು ದೇವಸ್ಥಾನ ಗಳಲ್ಲಿ ಒಂದು ಸಾವಿರದೆಂಟು ಶಂಖಗಳಿದ್ದು ವಿಶೇಷ ಸಂಧರ್ಭಗಳಲ್ಲಿ ಈ ಎಲ್ಲ ಶಂಖಗಳಲ್ಲೂ ಪವಿತ್ರ ಗಂಗೆ ಯನ್ನಿಟ್ಟು ಮಹಾಶಂಖಾಭಿಷೇಕವನ್ನು ಮಾಡುತ್ತಾರೆ. 

ರಾಮಾಯಣ, ಮಹಾಭಾರತಗಳಲ್ಲೂ ಶಂಖದ ಪಾತ್ರ ಬಹಳ ಮುಖ್ಯವಾದುದು.

ಆಗಿನ ಕಾಲದಲ್ಲಿ ಪ್ರತಿಯೊಬ್ಬ ಪ್ರಮುಖನ ಬಳಿಯೂ ಒಂದೊಂದು ಶಂಖವಿದ್ದು ಅದಕ್ಕೆ ಪ್ರತ್ಯೇಕ ಹೆಸರು ಇರುತ್ತಿತ್ತು.

ಶ್ರೀಕೃಷ್ಣನ ಶಂಖದ ಹೆಸರು ಪಾಂಚಜನ್ಯ, 

ಅರ್ಜುನನದು ದೇವದತ್ತ,

ಭೀಮನದು ಪೌಂಢ್ರ, 

ಯುಧಿಷ್ಠಿರನದು ಅನಂತ ವಿಜಯ, 

ನಕುಲನದು ಸುಘೋಶ, 

ಸಹದೇವನದು ಮಣೀಪುಷ್ಪಕ 

– ಹೀಗೆ ಮಹಾವಿಷ್ಣುವಿನ ಎಡಹಸ್ತದಲ್ಲಿ ಸದಾ ಶಂಖ ಶೋಭಿಸುತ್ತಿರುತ್ತದೆ. ಶ್ರೀ ವಿಷ್ಣುವನ್ನು ಶಂಖ ಚಕ್ರ ಗಧಾ ಹಸ್ತ ಎಂದೇ ಶ್ಲೋಕಗಳು ವರ್ಣಿಸುತ್ತವೆ.

ಕುಬೇರನ ಬಳಿಯಿದ್ದ ನವನಿಧಿಗಳಲ್ಲಿ ಅಕ್ಷಯವಾಗುತ್ತಿದ್ದ ನಿಧಿಯನ್ನು ಶಂಖ ನಿಧಿ ಎಂದೆನ್ನುತ್ತಾರೆ. 

ಕೆಲವು ಪ್ರಮುಖ ದೇವಾಲಯಗಳಲ್ಲಿ ಅವರದ್ದೇ ಪ್ರತ್ಯೇಕವಾದ ವಾದ್ಯ ವೃಂದ ವಿದ್ದುˌ ಅವರಲ್ಲಿ ಶಂಖವಾದ್ಯಕ್ಕೆ ಪ್ರಮುಖ ಸ್ಥಾನವಿರುತ್ತದೆ. ಅಂತಹ ಶಂಖಗಳನ್ನು ವಿಶೇಷರೀತಿಯಲ್ಲಿ ಅಲಂಕರಿಸುತ್ತಾರೆ. 

ಊದುವ ಭಾಗಕ್ಕೆ ಸಾಮಾನ್ಯವಾಗಿ ಬೆಳ್ಳಿಯ ತಗಡಿನ ನವಿಲುಗರಿಯ ರೂಪದ ಕೆತ್ತನೆ ಕೆಲಸವಿರುತ್ತದೆ. ಶಂಖವನ್ನು ಎರಡೂ ಕಡೆಯಿಂದ ಊದಬಹುದು.

ಇದು ಬಹಳ ಪುರಾತನ ವಾದ್ಯವೇ ಆದರೂˌ ಕಲಿಯುವುದು ಬಹಳ ಕಷ್ಟ ಹಾಗೂ ಕಲಿಯಲು ಬಹಳ ಬಲವಿರಬೇಕೆಂಬ ಕಾರಣದಿಂದಲೋ ಏನೋ ಇದು ಜನಪ್ರಿಯವಾಗಿಲ್ಲ. 

ಇನ್ನು ವೈಜ್ಞಾನಿಕ ದೃಷ್ಟಿಯಿಂದ ನೋಡಿದರೆˌ ಶಂಖ ವಿಜ್ಞಾನಿಗಳ ಗಮನ ವನ್ನು ಬಹಳವಾಗಿ ಸೆಳೆದಿದೆ.

ಶಂಖವನ್ನು ಊದುವಾಗ ಅದರೊಳಗೆ ಪ್ರವೇಶಿಸುವ ಉಸಿರು ಶಂಖದೊಳಗಿನ ವಕ್ರದಾರಿ ಯನ್ನು ದಾಟಿ ಹೊರಬರುವಾಗˌತೀವ್ರವೇಗವುಳ್ಳದ್ದೂ ಹೆಚ್ಚು; ಉಷ್ಣತೆ ಯುಳ್ಳದ್ದೂ ಆಗುವದೆಂದು ಪ್ರಯೋಗ ಗಳಿಂದ ಸಿದ್ಧವಾಗಿದೆ. 

ಹೀಗೆ ಶಂಖದಿಂದ ಹೊರಬರುವ ಗಾಳಿಯ ಉಷ್ಣಾಂಶವು ನೂರಕ್ಕೆ ಎಂಟ್ರಷ್ಟಿದ್ದರೆ ಅದರ ಪ್ರಭಾವದಿಂದ ಹೊರಗಿನ ಗಾಳಿಯು ಒಂದು ಸೆಕೆಂಡಿಗೆ 8708 ಅಡಿ ವೇಗ ದಿಂದ ಚಲಿಸುವುದೆಂದು ಪ್ರಯೋಗ ಫಲಿತಾಂಶಗಳು ತಿಳಿಸುತ್ತವೆ. 

ತತ್ಪರಿಣಾಮವಾಗಿˌ ವಾತಾವರಣದಲ್ಲಿನ ರೋಗಜನಕ ಕೀಟಾಣುಗಳು ನಾಶವಾಗುವುದಲ್ಲದೆˌ ವಾತಾವರಣ ದಲ್ಲಿನ ತೇಜಸ್ಸತ್ಪದ ಪ್ರಮಾಣವೂ ಹೆಚ್ಚುವುದು.

ಇಂತಹ ವಾತಾವರಣ ದಲ್ಲಿನ ವಾಯುವನ್ನು ಉಸಿರಾಡುವುದರಿಂದˌ ದೇಹದಲ್ಲಿ ರೋಗ ನಿರೋಧಕ ಶಕ್ತಿಯೂ ಬೆಳೆಯುವುದು ಎಂದು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. 

ಧನ್ವಂತರೀ ನಿಘಂಟಿನಲ್ಲೂ ಶಂಖದ ಗುಣವರ್ಣನೆ ಹೀಗಿದೆ

ಶಂಖ ನಾದು ಕಟು ವಾಕೇ 

ವಿಯೋಷ್ಣ ವ್ರಕೀರ್ತಿತ

ಪರಿಣಾಮ ಜಯೇತ್ ಶೂಲಂ 

ಚಕ್ಷುಷಂ ರಕ್ತಪಿತ್ತಜಿತ 

ಶಂಖವು ರುಚಿಗೆ ಕಾರವೆನಿಸಿದರೂˌ ಜೀರ್ಣವಾದ ಮೇಲೆ ಮಧುರವಾಗಿ ರುವುದು. ಅದು ಸಮುದ್ರದಲ್ಲಿ ಹುಟ್ಟಿದರೂ ಜೀರ್ಣಾಗ್ನಿಯನ್ನು ಪ್ರಜ್ವಲಿಸುವುದರಿಂದ ವಿಷ್ಣುವೀರ್ಯ ವೆಂದು ಹೇಳುತ್ತಾರೆ.

ಅದು ಹೊಟ್ಟೆ ನೋವˌ ಕಣ್ಣಿನ ರೋಗ ಹಾಗೂ ರಕ್ತ ಸ್ರಾವದ ಬೇನೆಯನ್ನು ಗುಣಪಡಿಸುತ್ತದೆ. 

ಶಂಖವನ್ನು ನೀರುˌ ಜೇನುತುಪ್ಪ, ನಿಂಬೇರಸದಲ್ಲಿ ತೇಯ್ದು ತಿಂದರೆ ಅಮ್ಲಪಿತ್ತˌ ತಲೆತಿರುಗುವಿಕೆˌ ಮೊಡವೆˌ ಕುರು ಮುಂತಾದ ದೋಷಗಳ ನಿವಾರಣೆಯಾಗುವುದೆಂದು ಆಯುರ್ವೇದ ಶಾಸ್ತ್ರ ಹೇಳುತ್ತದೆ. 

ವೇಗ ಮಾತುಬಾರದ ಮಕ್ಕಳಿಗೆ ಶಂಖದಲ್ಲಿಟ್ಟ ನೀರನ್ನು ಕುಡಿಸುವುದುಂಟು. ಸ್ವರಮಂತ್ರ ದೋಷದಿಂದುಂಟಾದ ಮೂಕತನಕ್ಕೆ ರೋಗಿಯು ದಿನಾಲೂ ಕೆಲವು ಸಮಯದವರೆವಿಗೆ ಶಂಖವನ್ನು ಊದಬೇಕು. ಇದರಿಂದ ಕಿವಿಡುತನ ವನ್ನು ಸಹ ನಿವಾರಿಸಬಹುದು. 

ಉತ್ತರ ಪ್ರದೇಶದ ಕೆಲವೆಡೆಗಳಲ್ಲಿ ಮಾತು ಸರಿಯಾಗಿ ಬಾರದ ಮಕ್ಕಳಿಗೆ ಚಿಕ್ಕ ಶಂಖದ ಮಾಲೆಯನ್ನು ತೊಡಿಸುತ್ತಾರೆ. 

ಹೀಗೆ, ಶಂಖ ಪುರಾಣಗಳ ಕಾಲದಿಂದ ಇಂದಿನ ಕಾಲದವರೆವಿಗೂ ಪ್ರಸಿದ್ದವೂˌ ಉಪಯುಕ್ತವೂˌ ಪೂಜನೀಯವೂ ಆಗಿರುವ ಕೆಲವೇ ವಸ್ತುಗಳಲ್ಲಿ ಒಂದು.

ಶಂಖ ನಿನಾದ

ಶಂಖದ ರಂಧ್ರವನ್ನು ನಮ್ಮ ಕಿವಿಯ ಸಮೀಪವಿಟ್ಟು ಕೇಳಿದರೆ,ಅದರಿಂದ ಗುಯ್ ..ಎಂಬ ಶಬ್ದ ಕೇಳಿಸುವುದಲ್ಲವೇ??

ಇದನ್ನೇ ಸಂಶೋದಕರು “Natural Vibration” ಅಥವಾ ಭೂಮಿಯ ” Cosmic Energy ” ಎಂದು ತಿಳಿಸಿದ್ದಾರೆ. ಇವು ಯಾವಾಗಲೂ ಶಂಖದಲ್ಲಿ ಪ್ರವಹಿಸುತ್ತಿರುತ್ತವೆಂದು ಅಭಿಪ್ರಾಯ ಪಟ್ಟಿದ್ದಾರೆ.

ಶಂಖನಾದದಿಂದ ಬರುವ ಕಂಪನ ಭೂಮಿಯಲ್ಲಿರುವ ಅನೇಕ ಕೆಟ್ಟ ಶಕ್ತಿ ಗಳನ್ನು ನಾಶಪಡಿಸುತ್ತದೆ.ಪರಿಸರ ಮಾಲಿನ್ಯದಿಂದ ಒಜೋನ್ ಪದರಗಳಲ್ಲಿ ರಂಧ್ರಗಳುಂಟಾಗದಂತೆ ತಡೆಯ ಬಹುದುದೆಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಹಾಗೇ ಶಂಕನಾದವನ್ನು ಕೇಳಿದಾಗ ನಮ್ಮ ದೇಹದಲ್ಲಿ ಸಕಾರಾತ್ಮಕ ಶಕ್ತಿಗಳ ( Positive Psychological Vibrations ) ಸಂಚಾರವಾಗುತ್ತದೆ. ಇದರಿಂದ ಧೈರ್ಯ, ನಿರ್ಣಯ, ನಂಬಿಕೆ, ಆತ್ಮವಿಶ್ವಾಸ ಮುಂತಾದ ಗುಣಗಳು ಜಾಗೃತವಾಗುತ್ತದೆ. 

ಶಂಖವನ್ನು ನಿಯಮಿತವಾಗಿ ಊದುವುದರಿಂದ ಶ್ವಾಸಕೋಶಗಳು ಬಲಿಷ್ಠಗೊಳ್ಳತ್ತದೆ. ಶ್ವಾಸ ಸಂಬಂಧಿ ಕಾಯಿಲೆಗಳು ಕಡಿಮೆಯಾಗುತ್ತವೆಂದು ಸಂಶೋಧನೆಗಳಿಂದ ತಿಳಿದು ಬಂದಿದೆ.

ನಮ್ಮ ಸನಾತನ ಸಂಸ್ಕೃತಿಯಲ್ಲಿ ಶಂಖಕ್ಕೆ ಪೂಜ್ಯ ಸ್ಥಾನವನ್ನು ನೀಡಲಾಗಿದೆ.

ಧಾರ್ಮಿಕ ಕಾರ್ಯಕ್ರಮಗಳನ್ನು ಶಂಖನಾದದ  ಮೂಲಕವೇ ಪ್ರಾರಂಭಿಸ ಲಾಗುತ್ತದೆ. ಜಗತ್ತಿನ ಪರಿಪಾಲಕನಾದ ಮಹಾವಿಷ್ಣುವಿನ ಕೈಯಲ್ಲೂ ಶಂಖವನ್ನು ಕಾಣಬಹುದು.

ಮಹಾಭಾರತ ಯುದ್ಧ ದಲ್ಲೂ ಯುದ್ಧ ಪ್ರಾರಂಭವಾಗುವಾಗ ಶಂಖನಾದ ಮೊಳಗುತ್ತಿತ್ತು.

ವಿಷ್ಣುವಿನ ಶಂಖದ ಹೆಸರು  : – “ಪಾಂಚಜನ್ಯ

ಅರ್ಜುನನ ಶಂಖದ ಹೆಸರು : – “ದೇವದತ್ತ

ಯುಧಿಷ್ಠರನ ಶಂಖದ ಹೆಸರು : – “ಅನಂತ ವಿಜಯ

ನಕುಲನ ಶಂಖದ ಹೆಸರು : – “ಸುಘೋಷ” 

ಸಹದೇವನ ಶಂಖದ ಹೆಸರು : – “ಮಣಿ ಪುಷ್ಪಕ

ಶಂಖಗಳನ್ನು ಮಹಾಭಾರತದಲ್ಲಿ ಉಲ್ಲೇಖಿಸಲಾಗಿದೆ.        

ಶಂಖಗಳಲ್ಲೂ ಅನೇಕ ವಿಧಗಳಿವೆ :-

ಶಂಖಗಳ ಆಕೃತಿಗೆ : ಅನುಗುಣವಾಗಿ ಈ ರೀತಿ ವಿಂಗಡಿಸಲಾಗಿದೆ. 

ದಕ್ಷಿಣಾವರ್ತಿ ಶಂಖ 

ವಾಮವರ್ತಿ  ಶಂಖ

ಗೌಮುಖಿ  ಶಂಖ

ಗಣೇಶ  ಶಂಖ

ಕಾವುರಿ  ಶಂಖ 

ಮೋತಿ  ಶಂಖ

ಹೀರಾ  ಶಂಖ

ಈ ಪೋಸ್ಟ್‌ಗೆ ನಿಯಮಿತವಾಗಿ ಹೆಚ್ಚಿನ ಮಾಹಿತಿಯನ್ನು ಸೇರಿಸಲಾಗುತ್ತದೆ. ಸ್ವಲ್ಪ ಸಮಯದ ನಂತರ ದಯವಿಟ್ಟು ಈ ಪೋಸ್ಟ್‌ಗೆ ಪುನಃ ಭೇಟಿ ನೀಡಿ.

To watch videos on #Hinduism #Sanskrit language, SUBSCRIBE to my YouTube channel from this below link:

#BhagavanBhakthi YouTube channel

ಹಿಂದೂ (ಸನಾತನ) ಧರ್ಮ ಬಗ್ಗೆ ಮಾಹಿತಿ, ಸಂಗತಿಗಳು, ಹಿರಿಮೆ, ಮಹತ್ವ, ಪ್ರಾಮುಖ್ಯತೆ, ಇತ್ಯಾದಿ” ಕುರಿತು ಇನ್ನಷ್ಟು ತಿಳಿದುಕೊಳ್ಳಲು, ದಯವಿಟ್ಟು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:

ಹಿಂದೂ (ಸನಾತನ) ಧರ್ಮ ಬಗ್ಗೆ ಮಾಹಿತಿ, ಸಂಗತಿಗಳು, ಹಿರಿಮೆ, ಮಹತ್ವ, ಪ್ರಾಮುಖ್ಯತೆ, ಇತ್ಯಾದಿ

ಆತ್ಮೀಯ ಸ್ನೇಹಿತರೇ, ಈ ಪೋಸ್ಟ್ ಬಗ್ಗೆ ನಿಮಗೆ ಯಾವುದೇ ಸ್ಪಷ್ಟೀಕರಣಗಳು ಬೇಕಾದರೆ, ದಯವಿಟ್ಟು ನನಗೆ ತಿಳಿಸಿ, ನಾನು ಖಂಡಿತವಾಗಿಯೂ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸುತ್ತೇನೆ.

ನಿಮ್ಮ ಒಂದು ಲೈಕ್, ಒಂದು ಕಾಮೆಂಟ್, ಒಂದು ಶೇರ್‌, ಒಂದು ಸಬ್‌ಸ್ಕ್ರಿಪ್ಷನ್ ತುಂಬಾ ಹೆಚ್ಚು ಮುಖ್ಯವಾಗುತ್ತದೆ.

ಇದು ಈ ವಿಷಯದ ಗುಣಮಟ್ಟವನ್ನು ತಿಳಿಯಲು ಸಹಾಯ ಮಾಡುತ್ತದೆ ಮತ್ತು ವಿಷಯಕ್ಕೆ ಯಾವುದೇ ಸುಧಾರಣೆಗಳು ಅಗತ್ಯವಿದೆಯೇ ಎಂದು ತಿಳಿಯಲು ಸಹಕಾರಿಯಾಗುತ್ತದೆ.

ಈ ವಿಷಯವು ನಿಮಗೆ ಉಪಯುಕ್ತವಾಗಿದೆ ಮತ್ತು ನಿಮ್ಮ ಜ್ಞಾನವನ್ನು ಹೆಚ್ಚಿಸಲು ನಿಮಗೆ ಸಹಾಯ ಮಾಡಿದೆ ಎಂದು ನೀವು ಭಾವಿಸಿದರೆ, ಇದನ್ನು ನಿಮ್ಮ ಹಿತೈಷಿಗಳೊಂದಿಗೆ ದಯವಿಟ್ಟು ಶೇರ್‌ ಮಾಡಿಕೊಳ್ಳಿ.

ಏಕೆಂದರೆ “ಶೇರ್‌ ಮಾಡುವುದೆಂದರೆ ಕೇರ್‌ ಮಾಡುವುದು ಎಂದರ್ಥ”.

#BhagavanBhakthi ಯ ಬಗ್ಗೆ ಉಚಿತ ಇ-ಮೇಲ್ ಚಂದಾದಾರಿಕೆಯನ್ನು ಪಡೆಯಲು, ನಿಮ್ಮ ಇ-ಮೇಲ್ ID ಯಿಂದ [email protected] ಗೆ ಇ-ಮೇಲ್ ಕಳುಹಿಸಬಹುದು.

ವಂದನೆಗಳು!

ಶ್ರೀ ಗುರುಭಯೋ ನಮಃ

ಶ್ರೀ ಕೃಷ್ಣಾಯ ನಮಃ

ಶ್ರೀಕೃಷ್ಣಾರ್ಪಣಮಸ್ತು

Share in Social Media

Leave a Reply

Your email address will not be published. Required fields are marked *